ದ.ಕ.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅಣಕು ಕಾರ್ಯಾಚರಣೆ

Update: 2022-06-25 17:19 GMT

ಮಂಗಳೂರು : ದ.ಕ.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಉಳ್ಳಾಲ ಕಡಲ ತೀರದಲ್ಲಿ ಶನಿವಾರ ಅಣಕು ಕಾರ್ಯಾಚರಣೆ ನಡೆಯಿತು.

ತುರ್ತು ಸಂದರ್ಭ ಮತ್ತು ಆಪತ್ಕಾಲದಲ್ಲಿ ಎದುರಿಸಬೇಕಾದ ಕ್ರಮಗಳ ಬಗ್ಗೆ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರ ಮಾರ್ಗದರ್ಶನದಲ್ಲಿ ನಡೆದ ಅಣಕು ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಮೀನುಗಾರಿಕಾ ಇಲಾಖೆ, ಬಂದರು ಇಲಾಖೆ, ಮೆಸ್ಕಾಂ, ಆರೋಗ್ಯ, ಲೋಕೋಪಯೋಗಿ ಇಲಾಖೆ, ಸಿಆರ್‌ಝೆಡ್, ಎಸ್‌ಡಿಆರ್‌ಎಫ್, ಸಿಎಸ್‌ಪಿ ಮತ್ತಿತರ ಇಲಾಖೆ ಮತ್ತು ಘಟಕಗಳ ಸಹಕಾರದಲ್ಲಿ ಸುಮಾರು ೩೦೦ರಷ್ಟು ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News