ಅಕ್ರಮ ಮಾಂಸ ಸಾಗಾಟ ಆರೋಪ: ಇಬ್ಬರ ಬಂಧನ
Update: 2022-07-01 12:00 GMT
ಉಳ್ಳಾಲ: ಮಂಜೇಶ್ವರದಿಂದ ಮಂಗಳೂರು ಕಡೆಗೆ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಗಳನ್ನು ಮಂಜೇಶ್ವರ ನಿವಾಸಿ ಮುಹಮ್ಮದ್ ಆಸೀಫ್(22) ಮತ್ತು ಉಪ್ಪಲ ನಿವಾಸಿ ಮುಹಮ್ಮದ್ ನೌಫಾಲ್(22) ಎಂದು ಗುರುತಿಸಲಾಗಿದೆ .
ಆರೋಪಿಗಳು ಓಮ್ನಿ ವಾಹನದಲ್ಲಿ 200 ಕೆಜಿ ಮಾಂಸ ಸಾಗಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸರು ವಾಹನ ಹಾಗೂ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.