ನರಿಂಗಾನ: ಗುಡ್ಡದಿಂದ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲುಗಳು
Update: 2022-07-05 13:33 GMT
ಕೊಣಾಜೆ: ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ನಿಂದ ತೌಡುಗೋಳಿ ಜಂಕ್ಷನ್ ಸಂಪರ್ಕಿಸುವ ರಸ್ತೆಯ ಕೊರಕಟ್ಟ ಬಳಿ ಗುಡ್ಡದಿಂದ ರಸ್ತೆಗೆ ಅಡ್ಡಲಾಗಿ ಎರಡು ಬೃಹತ್ ಬಂಡೆಕಲ್ಲು ಉರುಳಿ ಬಿದ್ದಿರುವ ಘಟನೆ ಮಂಗಳವಾರ ಸಂಭವಿಸಿದೆ.
ಬಂಡೆ ಉರುಳಿ ರಸ್ತೆಗೆ ಬಿದ್ದ ಸಂದರ್ಭ ವಾಹನ ಸಂಚಾರವಾಗಲಿ, ಪಾದಚಾರಿಗಳು ಇರಲಿಲ್ಲ. ಬಳಿಕ ಲೋಕೋಪಯೋಗಿ ಇಲಾಖೆ, ಸ್ಥಳೀಯರ ಸಹಕಾರದಲ್ಲಿ ಈ ಎರಡೂ ಬಂಡೆಗಳನ್ನು ತೆರವುಗೊಳಿಸಲಾಯಿತು.
ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಶೆಟ್ಟಿ, ಉಪಾಧ್ಯಕ್ಷ ನವಾಝ್ ನರಿಂಗಾನ, ಸದಸ್ಯ ಮುರಲೀಧರ ಶೆಟ್ಟಿ ಮೋರ್ಲ ಹಾಗೂ ಸಲೀಂ ಪೊಟ್ಟೊಳಿಕೆ, ಜಾರಪ್ಪ ಪೂಜಾರಿ ಕೊರಕಟ್ಟ, ಪಿಡಿಒ ರಜನಿ ಹಾಗೂ ಸ್ಥಳೀಯರು ಆಗಮಿಸಿ ತೆರವುಗೊಳಿಸುವ ವ್ಯವಸ್ಥೆ ಮಾಡಿದರು.