ಕೊಡಜೆ: ಯುವಕ ಆತ್ಮಹತ್ಯೆ

Update: 2022-07-06 15:20 GMT

ಬಂಟ್ವಾಳ, ಜು.6: ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಜೆಯಲ್ಲಿ ಬುಧವಾರ ನಡೆದಿದೆ.

ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ನಝೀರ್ (19) ಆತ್ಮಹತ್ಯೆ ಮಾಡಿದ ಯುವಕ ಎಂದು ತಿಳಿದುಬಂದಿದೆ.

ಮೂಲತಃ ಬುಡೋಳಿ ನಿವಾಸಿಯಾದ ಅವರು ಕೊಡಜೆಯಲ್ಲಿ ಇತ್ತೀಚಿನಿಂದ ವಾಸಿಸುತ್ತಿದ್ದರು. ಉಪ್ಪಳದಲ್ಲಿ ಕೆಲಸದಲ್ಲಿದ್ದ ನಝೀರ್ ಎರಡು ದಿನಗಳ‌ ಹಿಂದೆಯಷ್ಟೇ ಮನೆಗೆ ಬಂದಿದ್ದ ಎಂದು ತಿಳಿದುಬಂದಿದೆ.

ಇಂದು‌ ಮನೆಯ ಕೊಠಡಿಗೆ ಚಿಲಕ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News