ಶಿರಾಡಿ: ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತ್ಯು

Update: 2022-07-26 14:54 GMT

ನೆಲ್ಯಾಡಿ: ವಿದ್ಯುತ್ ಸ್ಪರ್ಶಿಸಿ ಬಾಲಕನೋರ್ವ ಮೃತಪಟ್ಟ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಇಂದು (ಜು.26) ಸಂಜೆ ನಡೆದಿದೆ.

ಅಡ್ಡಹೊಳೆ ನಿವಾಸಿ ಮೋನುಚ್ಚ ಎಂಬವರ ಪುತ್ರ ರೋಫಿನ್(15)ಮೃತಪಟ್ಟ ಬಾಲಕ. ಈತ ಮಧ್ಯಾಹ್ನ ಮನೆಯಲ್ಲಿ ಜಾರ್ಜ್ಗೆ ಇಟ್ಟ ಮೊಬೈಲ್ ತೆಗೆಯುತ್ತಿದ್ದಂತೆ ಸ್ವಿಚ್ ಬೋರ್ಡ್ ಹೊರಬಂದು ವಿದ್ಯುತ್ ಸ್ಪರ್ಶಿಸಿ ಗಂಭೀರ ಸ್ಥಿತಿಗೆ ತಲುಪಿದ್ದರು. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದೊಯ್ಯಿದರಾದರೂ ಆ ವೇಳೆಗೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News