​ಪಬ್ ದಾಳಿ ಕುರಿತು ಪೊಲೀಸ್ ಕಮಿಷನರ್ ಮೃದುವಾಗಿ ಪ್ರತಿಕ್ರಿಯಿಸಿದ್ದಾರೆ: ಮುನೀರ್ ಕಾಟಿಪಳ್ಳ

Update: 2022-07-26 18:12 GMT

ಮಂಗಳೂರು: ಪಬ್ ಮೇಲೆ ಬಜರಂಗ ದಳದ ದಾಳಿ ಕುರಿತು ಪೊಲೀಸ್ ಕಮಿಷನರ್ ತುಂಬಾ ಮೃದುವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಲೈಸನ್ಸ್ ಹೊಂದಿರುವ ಯಾವುದೇ ರೆಸ್ಟೋರೆಂಟ್, ಪಬ್ ಗಳಿಗೆ ತೆರಳಿ ಅಲ್ಲಿನ ಗ್ರಾಹಕರನ್ನು ಹೊರಗೆ ಕರೆಸುವ, ಪರಿಶೀಲನೆ ನಡೆಸುವ ಅಧಿಕಾರ ಸಂಘಟನೆಗಳಿಗೆ ಕೊಟ್ಟವರು ಯಾರು ? ಈ ಅಧಿಕಾರ ಬಜರಂಗ ದಳಕ್ಕೆ ಮಾತ್ರವಾ, ಅಥವಾ ಬೇರೆ ರಾಜಕೀಯ ಕಾರ್ಯಕರ್ತರಿಗೂ ಈ ಅವಕಾಶ ಇದೆಯೆ ? ಬೇರೆ ಸಂಘಟನೆಗಳು ಇದೇ ರೀತಿ ನಡೆದು ಕೊಂಡರೆ ಕಮೀಷನರ್ ಪ್ರತಿಕ್ರಿಯೆ ಹೀಗೆಯೆ ಇರುತ್ತದೆಯೆ ? ಬೀದಿಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಮಾಧ್ಯಮಗಳ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಜರಂಗ ದಳದ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಲೇಬೇಕು ಎಂದು ಅವರು ಹೇಳಿದ್ದಾರೆ.

ಮಂಗಳೂರಿನ ವೀರಾಧಿ ವೀರ ಶಾಸಕರುಗಳು ಈ ಕುರಿತು ಏನಾದರು ಪ್ರತಿಕ್ರಿಯಿಸಿದರಾ ? ಬಜರಂಗ ದಳದ ನಿಲುವು ಸರಿ ಅಂತಾದರೆ ಮಂಗಳೂರಿನ ಎಲ್ಲಾ ಪಬ್ ಗಳನ್ನು ಬಾಗಿಲು ಮುಚ್ಚಿಸಲು ಒಂದು ದೃಢ ತೀರ್ಮಾನವನ್ನು ಬಿಜೆಪಿ ಪಕ್ಷ, ಶಾಸಕರುಗಳು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ತೆಗೆದುಕೊಳ್ಳಲಿ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News