ನ.2ರಿಂದ ಜಾಗತಿಕ ಹೂಡಿಕೆದಾರರ ಸಭೆ: ಸಚಿವ ಮುರುಗೇಶ್ ನಿರಾಣಿ

Update: 2022-08-04 14:23 GMT

ಬೆಂಗಳೂರು, ಆ.4: ಈ ವರ್ಷ ನವೆಂಬರ್ 2ರಿಂದ 4ರ ವರೆಗೆಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಹೂಡಿಕೆದಾರರ ಸಭೆ ಉದ್ಘಾಟಿಸಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ 'ಉಬುಂಟು' ಆಯೋಜಿಸಿದ್ದ ಡಿಜಿಟಲ್ ಮಾರ್ಕೆಟಿಂಗ್‍ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕವು ಉದ್ಯಮ ಸ್ನೇಹಿ ರಾಜ್ಯ ಮತ್ತು ಕೈಗಾರಿಕೆಗಳು ಮತ್ತು ಕಂಪನಿಗಳನ್ನು ಉತ್ತೇಜಿಸಲು ಅತ್ಯಂತ ಪ್ರಗತಿಪರ ನೀತಿಗಳನ್ನು ಹೊಂದಿದೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಕರ್ನಾಟಕವು ಅತಿ ಹೆಚ್ಚು ಎಫ್‍ಡಿಐ ಪಡೆಯುತ್ತಿದೆ, ವ್ಯಾಪಾರ ಮಾಡಲು ಸುಲಭವಾದ ರಾಜ್ಯಗಳಲ್ಲಿ ಕರ್ನಾಟಕವೂ ಕೂಡ ಒಂದು, ಅದರಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆಎಂದು ಹೇಳಿದರು.

ಐಟಿ-ಬಿಟಿಯಲ್ಲಿ ನಾವು ಏರೋಸ್ಪೇಸ್ ಮತ್ತುಡಿಫೆನ್ಸ್ ಪಾರ್ಕ್‍ಗಳನ್ನು ಪ್ರಾರಂಭಿಸಿದ್ದೇವೆ, ಅದು ಹಲವಾರುಜನರಿಗೆ ಉದ್ಯೋಗವನ್ನು ನೀಡುತ್ತದೆ, ನಾವು ಸಾಕಷ್ಟು ಉದ್ಯಮ ಸ್ನೇಹಿ ನೀತಿಯನ್ನು ತಂದಿದ್ದೇವೆ ಮತ್ತುಕರ್ನಾಟಕವು ಮಾದರಿ ರಾಜ್ಯವಾಗಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

ಸವಾಲುಗಳನ್ನು ಎದುರಿಸಿ ಮತ್ತು ಅದನ್ನು ಗೆಲ್ಲಿರಿ.ನೀವು ನೀರಿನ ಬಗ್ಗೆ ಹೆದರುತ್ತಿದ್ದರೆ, ನೀವು ಎಂದಿಗೂ ಈಜುವುದನ್ನು ಕಲಿಯುವುದಿಲ್ಲ.ಆದುದರಿಂದ, ಬದುಕಿನಲ್ಲಿ ತೊಡಕುಗಳನ್ನು ಎದುರಿಸಿ ರಿಸ್ಕ್ ತೆಗೆದುಕೊಂಡು ಯಶಸ್ವಿಯಾಗುವ ಸಮಯ ಇದಾಗಿದೆ. ರತ್ನ ಪ್ರಭಾ ಅವರು ಮಹಿಳಾ ಉದ್ಯಮಿಗಳನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎಂದುಅವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಉಬುಂಟು ಸ್ಥಾಪಕ ಅಧ್ಯಕ್ಷೆಕೆ.ರತ್ನಪ್ರಭಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News