ಬೆಂಗಳೂರು | ಪಾದಚಾರಿ ಮಾರ್ಗ ಅಡ್ಡಗಟ್ಟಿ ವ್ಯಾಪಾರ ನಡೆಸಿದರೆ ಎಫ್ಐಆರ್: ಪೊಲೀಸರ ಎಚ್ಚರಿಕೆ
Update: 2022-08-04 15:42 GMT
ಬೆಂಗಳೂರು, ಆ.4: ನಗರ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಅಡ್ಡಗಟ್ಟಿ ವ್ಯಾಪಾರ ಚಟುವಟಿಕೆಗಳನ್ನು ನಡೆಸಿದರೆ ಪೊಲೀಸರು ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ.
ನಗರ ಸಂಚಾರ ಪೊಲೀಸರು ಸಿಆರ್ಪಿಸಿ 107 ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.ಈ ಸಂಬಂಧ ಈಗಾಗಲೇರಾಜಾಜಿನಗರ ಸಂಚಾರ ಪೊಲೀಸರು ಇಬ್ಬರು ಅಂಗಡಿ ಮಾಲಕರ ಮೇಲೆ ಮೊಕದ್ದಮೆ ದಾಖಲಿಸಿ ಉತ್ತರ ವಿಭಾಗ ಕಾನೂನು ಸುವ್ಯವಸ್ಥೆ ಡಿಸಿಪಿ ಮುಂದೆ ಹಾಜರುಪಡಿಸಿದ್ದಾರೆ.
ಸದ್ಯ ಆರೋಪಿಗಳಿಗೆ ಪಾದಚಾರಿ ಮಾರ್ಗ ಬಂದ್ ಮಾಡದಂತೆ ಎಚ್ಚರಿಕೆ ನೀಡಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.