ಕೂಳೂರು ಫಲ್ಗುಣಿ ನದಿಯಲ್ಲಿ ಮರಳು ಕಳವು ಯತ್ನ: ಪ್ರಕರಣ‌ ದಾಖಲು

Update: 2022-08-05 16:48 GMT

ಪಣಂಬೂರು, ಆ.5: ಕೂಳೂರು ಫಲ್ಗುಣಿ ನದಿಯಲ್ಲಿ ಮರಳು ಕಳವು ಮಾಡಲೆತ್ನಿಸಿದ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಕುದುರೆಮುಖ ಜಂಕ್ಷನ್ ಬಳಿ ಕೂಳೂರು ಫಲ್ಗುಣಿ ನದಿಯಲ್ಲಿ ಮರಳು ಕಳ್ಳತನ ಮಾಡುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಪಣಂಬೂರು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲಿಸಿದಾಗ ಎರಡು ಡ್ರಜ್ಜಿಂಗ್ ಮೆಶಿನ್ ಗಳು ಹಾಗೂ ಎರಡು ಟಿಪ್ಪರ್ ಲಾರಿಗಳ ಮೂಲಕ ಅಕ್ರಮವಾಗಿ‌‌ ಮರಳು ಸಾಗಾಟಕ್ಕೆ ಯತ್ನಿಸಲಾಗಿತ್ತು. ಪೊಲೀಸರ‌ ದಾಳಿಯ ವೇಳೆ ಮರಳು ಕಳವಿಗೆ ಯತ್ನಿಸಿದವರು ಪರಾರಿಯಾಗಿದ್ದಾರೆ ಎಂದು ತಿಳಿದು‌ಬಂದಿದೆ.

ಸ್ಥಳದಲ್ಲಿ ಬಿಟ್ಟು ಹೋಗಿರುವ ಜೆಸಿಬಿ ಯಂತ್ರ, 2 ಟಿಪ್ಪರ್ ಲಾರಿಗಳು, 2ಡ್ರೆಜ್ಜಿಂಗ್‌ ಯಂತ್ರ, ಒಂದು ಕಾರು, ಒಂದು ಬೈಕ್ ವಶಕ್ಕೆ‌ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
ಈ‌‌ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News