ಕೆ.ಐ.ಸಾಹುಲ್ ಹಮೀದ್

Update: 2022-08-10 15:19 GMT

ಮುಲ್ಕಿ: ಹಳೆಯಂಗಡಿ ಸಂತೆಕಟ್ಟೆಯ ನಿವಾಸಿ ಕೆ.ಐ. ಸಾಹುಲ್ ಹಮೀದ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.

ಲೋಕೋಪಯೋಗಿ ಇಲಾಖೆಯ A1 ಗುತ್ತಿಗೆದಾರರಾಗಿ, ಹಳೆಯಂಗಡಿ ಪರಿಸರದಲ್ಲಿ ಕೊಡುಗೈ ದಾನಿಯಾಗಿದ್ದರು. ಅಲ್ಲದೇ, ಇವರು ಹಲವು ಮಸೀದಿಗಳ ನಿರ್ಮಾಣದಲ್ಲೂ ತಮ್ಮ ಸಹಾಯ ಹಸ್ತ ಚಾಚಿದ್ದರು.

ಮೃತರು ಪತ್ನಿ ಮತ್ತು ಐವರು ಪುತ್ರಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮುಸ್ಲಿಂ ಒಕ್ಕೂಟ ಹಳೆಯಂಗಡಿ ಇದರ ಅಧ್ಯಕ್ಷ ಹಾಗೂ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಕೆ.ಸಾಹುಲ್ ಹಮೀದ್ ಕದಿಕೆ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮನ್ಸೂರ್ ಸಾಗ್, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಕದಿಕೆ ಕೇಂದ್ರ ಜುಮಾ ಮಸೀದಿಯ ಧರ್ಮಗುರುಗಳು, ಕದಿಕೆ ಜುಮಾ‌ ಮಸೀದಿಯ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಮೂಡುತೋಟ ಸಾಗ್ ಸೇರಿದಂತೆ ಗಣ್ಯರು ಸಾಹುಲ್ ಹಮೀದ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ