ಪಿಎಂ ಕಿಸಾನ್ ಯೋಜನೆಯಡಿ ಇ-ಕೆವೈಸಿ ಮಾಡಿಸಲು ಆ.15 ಕೊನೆಯ ದಿನ

Update: 2022-08-13 13:02 GMT

ಉಡುಪಿ, ಆ.13: ಕೃಷಿ ಇಲಾಖೆಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರಕಾರದಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಸಹಾಯಧನ ಪಡೆಯುತ್ತಿರುವ ಜಿಲ್ಲೆಯ ರೈತರು ಆ.15ರೊಳಗೆ  ಸಮೀಪದ ಕಾಮನ್ ಸರ್ವಿಸ್ ಸೆಂಟರ್‌ಗಳಲ್ಲಿ ಅಥವಾ ಸ್ಮಾರ್ಟ್‌ಪೋನ್ ಬಳಸುತ್ತಿರುವ ರೈತರು ಪಿಎಂ ಕಿಸಾನ್ ವೆಬ್ ಪೋರ್ಟಲ್ - www.pmkisan.gov.in- ತಂತ್ರಾಂಶದ ಮೂಲಕ ತಮ್ಮ ಬ್ಯಾಂಕ್‌ಖಾತೆಗೆ ಇ-ಕೆವೈಸಿ  ಮಾಡಿಕೊಳ್ಳಬಹುದಾಗಿದೆ.

ಆ.15ರ ಒಳಗೆ ಇ-ಕೆವೈಸಿ ಮಾಡಿಸದೇ ಇರುವ ರೈತರಿಗೆ ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News