ಮಂಗಳೂರು : ‘ಮುಲ್ಲರ್ ಸೈಕಾನ್-2022’ ಕಾರ್ಯಗಾರ

Update: 2022-08-14 12:07 GMT

ಮಂಗಳೂರು : ಫಾ.ಮುಲ್ಲರ್ಸ್‌ ಮೆಡಿಕಲ್ ಕಾಲೇಜಿನ ಮನೋರೋಗ ವಿಭಾಗದ ವತಿಯಿಂದ ‘ಮುಲ್ಲರ್ ಸೈಕಾನ್-2022’ ಕಾರ್ಯಗಾರ ನಡೆಯಿತು.

ಡಾ. ಕಿರಣ್ ಕುಮಾರ್ ಪಿ.ಕೆ. ಕಾರ್ಯಾಗಾರ ಉದ್ಘಾಟಿಸಿದರು. ಫಾ. ಮುಲ್ಲರ್ಸ್‌ ಸಮೂಹ ಸಂಸ್ಥೆಗಳ ನಿರ್ದೇಶಕ ವಂ.ಫಾ. ರಿಚರ್ಡ್ ಆಲೋಯಸ್ ಕುವೆಲ್ಲೊ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷ ಡಾ. ಸುಪ್ರಿಯಾ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಗಲೀನಾ ಲೀಸಾ ಡಿಸೋಜ ವಂದಿಸಿದರು. ಕಾರ್ಯಕ್ರಮದಲ್ಲಿ ಫಾ. ಮುಲ್ಲರ್ ಆಸ್ಪತ್ರೆಯ ಮೇಡಿಕಲ್ ಕಾಲೇಜಿನ ಆಡಳಿತಾಧಿಕಾರಿ ವಂ. ಫಾ. ಅಜಿತ್ ಮೆನೇಜಸ್, ಡೀನ್‌ಗಳಾದ ಆ್ಯಂಟನಿ ಸಿಲ್ವಾನ್ ಡಿಸೋಜ, ಉರ್ಬನ್ ಡಿಸೋಜ, ಮೆಡಿಕಲ್ ಸುಪರಿಡೆಂಟ್‌ಗಳಾದ ಡಾ. ಉದಯ್ ಕುಮಾರ್, ಡಾ. ಸಂಜೀವ ರೈ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಕೆಲ್ವಿನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News