ಮಂಗಳೂರು: ಹಿದಾಯ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Update: 2022-08-15 03:41 GMT

ಮಂಗಳೂರು, ಆ.15: ಹಿದಾಯ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಸಂಸ್ಥೆಯ ಕಚೇರಿಯ ಬಳಿ ಇಂದು ಬೆಳಗ್ಗೆ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಯುನಿಟಿ ಹೆಲ್ತ್ ಸೆಂಟರ್ ಇದರ ಅಧ್ಯಕ್ಷ ಡಾ. ಸಿ.ಪಿ. ಹಬೀಬ್ ರಹ್ಮಾನ್ ಧ್ವಜಾರೋಹಣಗೈದು ಸ್ವಾತಂತ್ರ್ಯದ ಸಂದೇಶ ನೀಡಿದರು.

ಈ ಸಂದರ್ಭ ಪ್ರಮುಖ ಗಣ್ಯರಾದ ಝಕರಿಯಾ ಜೋಕಟ್ಟೆ, ರಿಯಾಝ್ ಬಾವಾ, ಖಾಸಿಮ್ ಅಹ್ಮದ್, ಕಾರ್ಪೊರೇಟರ್ ಅಬ್ದುರ್ರವೂಫ್ ಬಜಾಲ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್.‌, ಸುನೀಲ್ ಕೊಟ್ರಾಡೊ, ಮುಸ್ತಫಾ, ಸಲೀಂ, ಅಬ್ಬಾಸ್ ಪೋಕರ್ ಉಚ್ಚಿಲ್, ಇಮ್ತಿಯಾಝ್ ಬಿ, ಅಹ್ಮದ್ ಬಾವಾ ದುಬೈ, ತನ್ವೀರ್, ಸಾದಿಕ್‌ ಹಸನ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News