ಸಂತೋಷನಗರ ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

Update: 2022-08-15 07:39 GMT
(ಸಂತೋಷ ನಗರದ ಬದ್ರಿಯಾ ಜುಮಾ ಮಸೀದಿ)

ಉಡುಪಿ, ಆ.15: ಸಂತೋಷ ನಗರದ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಮಸೀದಿ ಧರ್ಮಗುರು ಮುಹಮ್ಮದ್ ಹನೀಫ್ ಮದನಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಹಬೀಬ್ ಅಲಿ ಖಾದರ್, ಕಾರ್ಯ ದರ್ಶಿ ಎಸ್.ಎ.ಫೈಸಲ್, ಕೋಶಾಧಿಕಾರಿ ಹಸನ್ ಅಬ್ದುಲ್ಲ, ಕಮಿಟಿ ಸದಸ್ಯರು ಗಳಾದ ಇಕ್ಬಾಲ್, ಅಬೂಬಕರ್ ಸಿದ್ದಿಕ್, ಮುಹಮ್ಮದ್ ಎಝಜ್, ರಿಯಾಜ್, ತೌಫೀಕ್, ಅಹಮ್ಮದ್, ಆಸೀಫ್, ಉಮ್ಮರ್, ಹನೀಫ್ ಯು.ಜೆ., ಆರೀಫ್ ರೆಹಮನ್, ಶಮೀರ್ ಮತ್ತು ಮದರಸ ಮಕ್ಕಳು ಉಪಸ್ಥಿತರಿದ್ದರು.

ಕುಂಜಿಬೆಟ್ಟು ಓಂವಿಹಾರ ವಸತಿ ಸಮುಚ್ಚಯದಲ್ಲಿ ಸ್ವಾತಂತ್ರ್ಯೋತ್ಸ

ಉಡುಪಿ : ಕುಂಜಿಬೆಟ್ಟು ಪುರುಷೋತ್ತಮ ನಗರದ ಓಂವಿಹಾರ ವಸತಿ ಸಮುಚ್ಚಯದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

ನಿವೃತ್ತ ಸೇನಾನಿ ಬಾಲಚಂದ್ರ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಕ್ರೀಡಾಳು ವಾಣಿ ಬಾಲಚಂದ್ರ ಧ್ವಜಾರೋಹಣ ನೆರವೇರಿಸಿದರು. ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪನಾ ಅಧಿಕಾರಿ ಸಿ.ಕೆ.ಪೈ ಸ್ವಾತಂತ್ರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಸುಶೀರ್ ರಾವ್ ಕೊಡವೂರು ಮತ್ತು ಮಂಜುನಾಥ್ ಕಾರ್ಯ ಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News