ಬದ್ರಿಯಾ ಜುಮಾ ಮಸೀದಿ ಉಕ್ಕುಡದಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2022-08-15 11:28 GMT

ಉಕ್ಕುಡ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬದ್ರಿಯಾ ಜುಮಾ ಮಸೀದಿ ಉಕ್ಕುಡ ವಠಾರದಲ್ಲಿ ಮೇರಾ ವತನ್ ಎಂಬ ಧ್ಯೇಯ ವಾಕ್ಯದೊಂದಿಗೆ ವಿಜ್ರಂಭಣೆಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ನೂರುಲ್ ಹುದಾ ಮದರಸ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಮುಹ್ಯಿಸ್ಸುನ್ನ  ದರ್ಸ್ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ವಿಟ್ಲದ ಪ್ರತಿಷ್ಠಿತ ವೈದ್ಯರಾದ ಡಾ. ವಿ ಕೆ ಹೆಗ್ಡೆರವರು ಧ್ವಜಾರೋಹಣವನ್ನು ನಡೆಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ಮುದರ್ರಿಸರಾದ ಹಾಫಿಲ್ ಅಹ್ಮದ್ ಶರೀಫ್ ಸಖಾಫಿ ಮಳಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಶಿಕ್ಷಕರಾದ ಅಬ್ದುಲ್ ಹಮೀದ್ ಮದನಿ ಸ್ವಾಗತಿಸಿ ಅಲ್ ನೂರು  ರಶೀದ್ ವಿಟ್ಲ ಸಂದೇಶ ಭಾಷಣವನ್ನು ಮಾಡಿದರು.

ಮಸೀದಿ ಆಡಳಿತ ಕಮಿಟಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ THMA, ಪ್ರಧಾನ ಕಾರ್ಯದರ್ಶಿ U.S ಶರೀಫ್ ಹಾಗು ಇತರರು ಉಪಸ್ಥಿತರಿದ್ದರು. ಮದ್ರಸ ಶಿಕ್ಷಕರಾದ ಯಾಸೀನ್ ಸಅದಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News