ಕೋಡಿಜಾಲ್: ರಿಫಾಯಿ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Update: 2022-08-15 13:32 GMT

ಕೊಣಾಜೆ, ಆ.15: ಕೋಡಿಜಾಲ್ ರಿಫಾಯಿ ಜುಮಾ ಮಸ್ಜಿದ್, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಕೋಡಿಜಾಲ್ ಹಾಗೂ ಜಿಸಿಸಿ ಘಟಕ, ಹಯಾತುಲ್ ಇಸ್ಲಾಂ ಮದ್ರಸ ಕೋಡಿಜಾಲ್ ಇದರ ಆಶ್ರಯದಲ್ಲಿ ಮಸೀದಿ ಆವರಣದಲ್ಲಿ 76ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ  ಹಾಜಿ ಇಬ್ರಾಹೀಂ ಕೋಡಿಜಾಲ್ ಧ್ವಜಾರೋಹಣಗೈದು ಸ್ವಾತಂತ್ರ ದಿನಾಚರಣೆಯ ಸಂದೇಶ ನೀಡಿದರು.

ಮಸೀದಿಯ ಮಾಜಿ ಖತೀಬರಾದ ಅಲ್ಹಾಜ್ ಅಬೂಬಕರ್ ಸಖಾಫಿ ದುಆ ನೆರವೇರಿಸಿದರು. ಮತ್ತು ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ, ಮಸೀದಿಯ ನೂತನ ಖತೀಬರಾದ ಅಬ್ದುಲ್ ಖಾದರ್ ಮೌಲವಿ ಹಾಗೂ ಅಬ್ದುಲ್ ಲತೀಫ್ ಮದನಿ
ಅವರು ಸ್ವಾತಂತ್ರ ದಿನಾಚರಣೆಯ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಕೊಣಾಜೆ ಗ್ರಾಮ ಪಂಚಾಯತ್  ಸದಸ್ಯರಾದ ಅಚ್ಚುತ ಗಟ್ಟಿ, ಮುಹಮ್ಮದ್ ಇಕ್ಬಾಲ್ ಕೊಣಾಜೆ, ಮಸೀದಿಯ ಕೋಶಾಧಿಕಾರಿ ಹಾಜಿ ಮುಹಮ್ಮದ್, ಉಪಾಧ್ಯಕ್ಷರಾದ  ಅಬ್ದುಲ್ ಖಾದರ್ ಅಂದುಚ್ಚ, ಹಿರಿಯರಾದ ಹಾಜಿ ಅಬ್ದುಲ್ ಖಾದರ್, ಮುಹಮ್ಮದ್, ಉಸ್ಮಾನ್, ಕಾರ್ಯದರ್ಶಿ ಮಸೂದ್,  ಸದರ್ ಮುಅಲ್ಲಿಮ್ ಉಮರ್ ಸಅದಿ, ಮುಹಝ್ಝಿನ್ ಇಬ್ರಾಹೀಂ ಎಚ್.ಎಂ., ಕೆ.ಐ.ಎ ಜಿಸಿಸಿ ಘಟಕದ ಅಧ್ಯಕ್ಷ ಅನ್ಸಾರ್' ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್‌ನ ಅಧ್ಯಕ್ಷ ಅಮೀರ್, ಗೌರವಾಧ್ಯಕ್ಷ ರಹಿಮಾನ್ ಕೆ.ಎಂ., ಉಪಾಧ್ಯಕ್ಷ ಹನೀಫ್, ರಝಾಕ್, ಖಾದರ್ ಕೆ.ಎಂ.ಕೆ,  ಕೋಶಾಧಿಕಾರಿ ಅಶ್ರಫ್, ಕಾರ್ಯದರ್ಶಿ ರಿಯಾಝ್, ಅನ್ವರ್ ಸಾದಾತ್, ಅಝೀಝ್ ಇಸ್ಮಾಯಿಲ್  ಹಾಗೂ ಮದ್ರಸ ಆಡಳಿತ ಸಮಿತಿಯ ಉಸ್ಮಾನ್ ಕೆ.ಎಸ್, ಇಬ್ರಾಹಿಂ ಕೆ.ಎಂ., ಹಸೈನಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ  ಜಮಾಅತ್ ಮತ್ತು ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಮದ್ರಸ ವಿದ್ಯಾರ್ಥಿಗಳು  ಹಾಗೂ ಊರಿನ ನಾಗರಿಕರು ಭಾಗವಹಿಸಿದ್ದರು. 

ಮಸೀದಿಯ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೆ.ಎಸ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ  ಪ್ರಧಾನ ಕಾರ್ಯದರ್ಶಿ ಶರೀಫ್ ಕೆ.ಐ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News