ಅಡ್ಡೂರು: ಸನ್ ಶೈನ್ ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ

Update: 2022-08-18 10:06 GMT

ಮಂಗಳೂರು: ಸ್ವಾತಂತ್ರ್ಯದ ಅಮೃತೋತ್ಸವದ ಪ್ರಯುಕ್ತ ಮಂಗಳೂರು ಹೊರವಲಯದ ಅಡ್ಡೂರಿನಲ್ಲಿ ಸನ್ ಶೈನ್ ಫ್ರೆಂಡ್ಸ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಧ್ವಜಾರೋಹಣವನ್ನು ಮುಖ್ಯ ಅತಿಥಿಗಳಾದ ಶಿಕ್ಷಣತಜ್ಞ ಎಂ.ಜಿ.ಹೆಗ್ಡೆ ಹಾಗೂ ಯು.ಪಿ.ಇಬ್ರಾಹೀಂ ನೆರವೇರಿಸಿದರು.

ಬಳಿಕ ಮಾತನಾಡಿದ ಎಂ.ಜಿ.ಹೆಗ್ಡೆ, ನಾವು ಕಲಿಯುವ ಇತಿಹಾಸದಿಂದ ದೇಶಕ್ಕೆ ಒಳಿತಾಗಬೇಕೇ ಹೊರತು, ಸಮಾಜಕ್ಕೆ ಕೆಡುಕುಂಟಡಾಗುವಂತಹ ಯಾವುದೇ ಇತಿಹಾಸವನ್ನು ನಾವು ಸ್ವೀಕರಿಸಿಬಾರದು. ಅದೇರೀತಿ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಮತ್ತು ಫೇಸ್ಬುಕ್ ನಲ್ಲಿ ಬರುವುದನ್ನೇ ಸತ್ಯವೆಂದು ನಂಬದೆ ಅದರ ಮೂಲವನ್ನು ಅರಿಯಲು ಪ್ರಯತ್ನ ಮಾಡಬೇಕು ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ ಶೈನ್ ಫ್ರೆಂಡ್ಸ್ ಅಧ್ಯಕ್ಷ ಎ.ಕೆ.ಹನೀಫ್ ವಹಿಸಿದ್ದರು. ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು, ಅಹ್ಮದ್ ಬಾವ ಅಂಗಡಿಮನೆ, ಇಕ್ಬಾಲ್ ಎಂ.ಐ., ಚಿದಾನಂದ ನಂದ್ಯ ಹಾಗೂ ಊರಿನ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

  ಸನ್ ಶೈನ್ ಫ್ರೆಂಡ್ಸ್ ಸಲಹೆಗಾರ ಎಂ.ಎಸ್.ಹಿದಾಯತುಲ್ಲ ಸ್ವಾಗತಿಸಿದರು. ನಾಸಿರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News