ತೆರಿಗೆ, ದಂಡ ವಸೂಲಿ ಮಾಡುವ ಸರ್ಕಾರ ರಸ್ತೆ ಗುಂಡಿ ಮುಚ್ಚದೆ ಏನು ಮಾಡುತ್ತಿದೆ?: BBMP ವಿರುದ್ಧ ನೆಟ್ಟಿಗರ ಆಕ್ರೋಶ
ಬೆಂಗಳೂರು: ರಸ್ತೆ ಗುಂಡಿಗಳಿಗೆ (pothole)ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿದ್ದರೂ ಬಿಬಿಎಂಪಿ (BBMP) ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಅಂದರೆ, ಆ. 18ರಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಪ್ರೀತ್ ಎಂಬವರು ತಮ್ಮ ಬೈಕಿನಲ್ಲಿ ಸುಂಕದಕಟ್ಟೆಯಿಂದ ಹೇರೋಹಳ್ಳಿ ಕಡೆಗೆ ಹೋಗುತ್ತಿದ್ದ ವೇಳೆ ರಾಮ್ರಾಜ್ ಗ್ರಾನೈಟ್ ಮುಂಭಾಗದ ರಸ್ತೆ ಮಧ್ಯದಲ್ಲಿದ್ದ ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಲ್ಲೇಶ್ವರಂನಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದರೂ ಅವರು ಅಂದಿನಿಂದಲೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಪ್ರೀತ್ ಆ.22ರಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಇನ್ನು ಈ ಪ್ರಕರಣದ ಬಳಿಕ ಸಮಾಜಿಕ ಜಾಲತಾಣಗಳಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
'ಬೆಂಗಳೂರಿನ ಸುಂಕದಕಟ್ಟೆ ಬಳಿ ಇರುವ ಗುಂಡಿಯಿಂದಾಗಿ ಬೈಕ್ ಸವಾರ ಸುಪ್ರೀತ್ ತನ್ನ ನಿಯಂತ್ರಣ ಕಳೆದುಕೊಂಡಿರುವುಸು ಸಿಸಿಟಿವಿ ಸ್ಪಷ್ಟವಾಗಿ ತೋರಿಸುತ್ತದೆ. ಆದರೆ, ಪೊಲೀಸರು ಎಫ್ಐಆರ್ನಲ್ಲಿ ಈ ನಿರ್ಲಕ್ಷ್ಯವನ್ನು ಸವಾರನ ಮೇಲೆ ಹೊರಿಸಿದ್ದಾರೆ. ಹೀಗಾದರೆ ಹೊಣೆಗಾರಿಕೆ ಎಲ್ಲಿದೆ?' ಎಂದು ದೀಪಕ್ ಬೋಪಣ್ಣ ಎಂಬವರು ಟ್ವಿಟ್ ಮಾಡಿದ್ದಾರೆ.
'ರಸ್ತೆ ಗುಂಡಿಗೆ ಬಿದ್ದು ಮರಣ ಹೊಂದುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ವಾಹನ ಸವಾರರಿಂದ ಎಲ್ಲಾ ಬಗೆಯ ಟಾಕ್ಸ್, ದಂಡಗಳನ್ನು ವಸೂಲಿ ಮಾಡುವ ಸರ್ಕಾರ ಗುಂಡಿ ಮುಚ್ಚದೆ ಏನು ಮಾಡುತ್ತಿದೆ ? ಸಾರ್ವಜನಿಕರ ಆಕ್ರೋಶ ಎಲ್ಲೆ ಮೀರುವ ಮೊದಲು ಸರ್ಕಾರ ಮತ್ತು ಬಿಬಿಎಂಪಿ ರಸ್ತೆ ಸರಿ ಮಾಡಿಸಬೇಕು ಎಂದು ಮನವಿ ಮಾಡುತ್ತೇನೆ' ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಟ್ವೀಟಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚಲು ವಿಫಲ; ಬಿಬಿಎಂಪಿ ಮುಖ್ಯ ಆಯುಕ್ತರು, ಮುಖ್ಯ ಎಂಜಿನಿಯರ್ ಹೈಕೋರ್ಟ್ ಗೆ ಹಾಜರು
ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಮರಣ ಹೊಂದುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ವಾಹನ ಸವಾರರಿಂದ ಎಲ್ಲಾ ಬಗೆಯ ಟಾಕ್ಸ್, ದಂಡಗಳನ್ನು ವಸೂಲಿ ಮಾಡುವ ಸರ್ಕಾರ ಗುಂಡಿ ಮುಚ್ಚದೆ ಏನು ಮಾಡುತ್ತಿದೆ ? ಸಾರ್ವಜನಿಕರ ಆಕ್ರೋಶ ಎಲ್ಲೆ ಮೀರುವ ಮೊದಲು ಸರ್ಕಾರ ಮತ್ತು ಬಿಬಿಎಂಪಿ ರಸ್ತೆ ಸರಿ ಮಾಡಿಸಬೇಕು ಎಂದು ಮನವಿ ಮಾಡುತ್ತೇನೆ pic.twitter.com/x78KHkYNc4
— Dr. K Govindaraj (@Iam_KGovindaraj) August 24, 2022
CCTV clearly shows 44-year-old Supreth losing control of his bike after he came in contact with a pothole near Sunkadkatte in Bengaluru. he eventually lost his life. Cops in the FIR have termed this negligence on the part of rider. Where is the accountability? pic.twitter.com/fQjOYdxESr
— Deepak Bopanna (@dpkBopanna) August 24, 2022
ರಸ್ತೆ ಗುಂಡಿ ತುಂಬಿಸ್ತೀವಿ ಅಂತ ಹೇಳಿದ್ದು ಜನರನ್ನೇ ಗುಂಡಿಗಳಲ್ಲಿ ಹೂತಾಕ್ತಾರೆ ಅಂತಾನಾ? ಇನ್ನೆಷ್ಟು ಬಲಿ ಬೇಕು ಇವರಿಗೆ?
— AAP Bengaluru (@AAPBangalore) August 23, 2022
Lives of Bangaloreans don't hold the same value as currency, for @BJP4Karnataka and @BBMPCOMM !@aapkaprithvi pic.twitter.com/HyOxwKVFlX