×
Ad

ಗುಜರಾತ್‌ನಲ್ಲಿ ಸಿರಿಚಾವಡಿ ಪುರಸ್ಕಾರ ಪ್ರದಾನ

Update: 2022-08-31 16:46 IST

ಮಂಗಳೂರು : ತುಳು ಸಾಹಿತ್ಯ ಅಕಾಡಮಿ ಮತ್ತು ತುಳುನಾಡ ಐಸಿರಿ ವಾಪಿ ಗುಜರಾತ್ ಸಂಸ್ಥೆಗಳ ಆಶ್ರಯದಲ್ಲಿ ವಾಪಿಯ ಕೋಲಿ ಸಮಾಜ ಸಭಾಗಣದಲ್ಲಿ ಇತ್ತೀಚೆಗೆ ಸಿರಿಚಾವಡಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಿತು.

ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು. ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಗುರುವಾಯನಕೆರೆ ತುಳುನಾಡ ಐಸಿರಿ ವೆಬ್‌ಸೈಟ್ ಅನಾವರಣಗೊಳಿಸಿದರು.

ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಗುರುವಾಯನಕರ ಅವರಿಗೆ ಸಿರಿಚಾವಡಿ ಗೌರವ ಪುರಸ್ಕಾರ, ಅಜಿತ್ ಎಸ್. ಶೆಟ್ಟಿ ಅಂಕ್ಲೇಶ್ವರ ಅವರಿಗೆ ಸಿರಿಚಾವಡಿ ಯುವ ಸಾಧಕ ಪುರಸ್ಕಾರ, ಹಿರಿಯ ಪತ್ರಕರ್ತ ಎಂ.ಎಸ್. ರಾವ್ ಅಹ್ಮದಾಬಾದ್ ಅವರಿಗೆ ಸಿರಿ ಚಾವಡಿ ಮಾಧ್ಯಮ ಪುರಸ್ಕಾರ,  ತ್ರಿಶಾ ಶೆಟ್ಟಿ ಅವರಿಗೆ  ಸಿರಿಚಾವಡಿ  ಬಾಲ ಸಾಧಕ ಪುರಸ್ಕಾರ, ತುಳುನಾಡ ಐಸಿರಿ ಚಾರಿಟೆಬಲ್ ಟ್ರಸ್ಟ್‌ನ ಪರವಾಗಿ ಅಧ್ಯಕ್ಷ ಬಾಲಕೃಷ್ಣ ಎಸ್. ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಸಿರಿಚಾವಡಿ ಸಂಘಟನಾ ಪುರಸ್ಕಾರವನ್ನು ಪ್ರದಾನಗೈದರು.

ಈ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪಡೆದ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಸನ್ಮಾನಿಸಲಾಯಿತು. 
ಅತಿಥಿಯಾಗಿ ಬಿಲ್ಲವ ಸಂಘ ಗುಜರಾತ್ ಗೌರವಾಧ್ಯಕ್ಷ ದಯಾನಂದ ಆರ್. ಬೋಂಟ್ರಾ ತುಳು ಸಂಘ ಬರೋಡ ಗೌರವ ಕಾರ್ಯದರ್ಶಿ ಬಾಲಕೃಷ್ಣ ಎಸ್.ಶೆಟ್ಟಿ, ಕರ್ನಾಟಕ ಸಂಘ ಸೂರತ್ ಉಪಾಧ್ಯಕ್ಷ ರಮೇಶ್ ಭಂಡಾರಿ, ತುಳು ಸಂಘ ಅಂಕಲೇಶ್ವರ ಅಧ್ಯಕ್ಷ ಶಂಕರ್ ಕೆ. ಶೆಟ್ಟಿ ಪಟ್ಲ ಫೌಂಡೇಶನ್ ಗುಜರಾತ್ ಘಟಕಾಧ್ಯಕ್ಷ ಅಜಿತ್ ಎಸ್. ಶೆಟ್ಟಿ, ತುಳು ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪುಎಲ್. ಶೆಟ್ಟಿ, ಕರ್ನಾಟಕ ಸಮಾಜ ಸೂರತ್‌ನ ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ, ತುಳು ಸಾಹಿತ್ಯ ಅಕಾಡಮಿಯ ಸದಸ್ಯರಾದ ನರೇಂದ್ರ ಕಡೆಕಾರು, ಪಿ.ಎಂ. ರವಿ ಮಡಿಕೇರಿ ಭಾಗವಹಿಸಿದ್ದರು.

ತುಳುನಾಡ ಐಸಿರಿ ವಾಷಿ ಗೌರವಾಧ್ಯಕ್ಷ ಸದಾಶಿವ ಜಿ. ಪೂಜಾರಿ, ಉಪಾಧ್ಯಕ್ಷ ನವೀನ್ ಎಸ್. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಪ್ರದೀಪ್ ಪೂಜಾರಿ, ಜತೆ ಕಾರ್ಯದರ್ಶಿ ಸುಕೇಶ್ ಎ. ಶೆಟ್ಟಿ, ಜತೆ ಕೋಶಾಧಿಕಾರಿ ಗಣೇಶ್ ಶೆಟ್ಟಿ, ಸಂಚಾಲಕ ಪುಷ್ಪರಾಜ್ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ಬಿ. ಶೆಟ್ಟಿ, ಕಾರ್ಯದರ್ಶಿ ಅರುಂಧತಿ ಶೆಟ್ಟಿ ಉಪಸ್ಥಿತರಿದ್ದರು.

ಪೂರ್ಣಿಮಾ ಶೆಟ್ಟಿ ಮತ್ತು ತಾರಾ ಶೆಟ್ಟಿ ಪ್ರಾರ್ಥನೆಗೈದರು. ಬಾಲಕೃಷ್ಣ ಎಸ್. ಶೆಟ್ಟಿ ಸ್ವಾಗತಿಸಿದರು. ಪ್ರಫುಲ್ಲಾ ಶೆಟ್ಟಿ, ಶಾಲಿನಿ ಶೆಟ್ಟಿ ಸೃಷ್ಟಿತಾ ಯು. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.

ಸಚಿನ್ ಪೂಜಾರಿ, ಪಿ.ಎಂ. ರವಿ ಪಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ನವೀನ್ ಶೆಟ್ಟಿ ನುಡಿನಮನ ಸಲ್ಲಿಸಿದರು. ಕೇಶವ ಪೂಜಾರಿ, ಕಾಂತಿ ಎಸ್. ಶೆಟ್ಟಿ, ಸೃಷ್ಟಿತಾ ಯು.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಉದಯ ಬಿ. ಶೆಟ್ಟಿ ವಂದಿಸಿದರು. ಚಂದ್ರಿಕಾ ಕೋಟ್ಯಾನ್ ಬಳಗದಿಂದ ಆಟಿ ಕಳಂಜೆ, ಕಂಗೀಲು ನೃತ್ಯ ನಡೆಯಿತು. ಸಾಂಪ್ರದಾಯಿಕ ತಿಂಡಿತಿನಿಸುಗಳ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News