×
Ad

ಭಾರತ್ ಜೋಡೋ ಯಾತ್ರೆಯ ಯಶಸ್ವಿಗೆ ಕಾಂಗ್ರೆಸ್ ಪ್ರಾರ್ಥನೆ

Update: 2022-09-07 22:40 IST

ಮಂಗಳೂರು, ಸೆ.7: ಎಐಸಿಸಿ ನಾಯಕ ರಾಹುಲ್ ಗಾಂಧಿಯ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬುಧವಾರ ಅರಂಭಗೊಂಡ ‘ಭಾರತ್ ಜೋಡೋ ಯಾತ್ರೆ’ಯ ಯಶಸ್ವಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ನಾಯಕರು ನಗರದ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಸ್ಥಾನ, ಉಳ್ಳಾಲದ ಸೈಯ್ಯದ್ ಮದನಿ ದರ್ಗಾ, ನಗರದ ಆಂಜೊಲೆರ್ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಟಿ.ಕೆ. ಸುಧೀರ್, ಆಶಿತ್ ಪಿರೇರಾ, ರಮಾನಂದ ಪೂಜಾರಿ, ಅಪ್ಪಿ, ವಹಾಬ್ ಕುದ್ರೋಳಿ, ಸಲೀಂ ಮುಕ್ಕ, ಹಸನ್ ಫಳ್ನೀರ್ ಮತ್ತಿತರರು ಮೂರು ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

‘ಭಾರತ್ ಜೋಡೋ ಯಾತ್ರೆ’ಯ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರವನ್ನು ಎಲ್‌ಇಡಿ ಪರದೆಯ ಮೂಲಕ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವೀಕ್ಷಿಸಲಾಯಿತು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಪಕ್ಷದ ಮುಖಂಡರಾದ ಉಮೇಶ್ ದಂಡಕೇರಿ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಮುಹಮ್ಮದ್ ಮೋನು ಮಲಾರ್, ಲಾರೆನ್ಸ್ ಡಿಸೋಜ, ಶುಭಾಷ್ ಚಂದ್ರ ಕೊಲ್ನಾಡು, ಚೇತನ್ ಬೆಂಗ್ರೆ, ನೀರಜ್‌ಚಂದ್ರ ಪಾಲ್, ಶಬ್ಬೀರ್ ಎಸ್, ನಿತ್ಯಾನಂದ ಶೆಟ್ಟಿ, ಶುಭೋದಯ ಆಳ್ವ, ಪ್ರೇಮ್ ಬಳ್ಳಾಲ್ ಭಾಗ್, ಸವಾದ್ ಸುಳ್ಯ, ಶಮೀರ್ ಪಜೀರ್, ಇಮ್ರಾನ್ ಎ.ಆರ್,  ಮಕ್ಬೂಲ್ ಕುದ್ರೋಳಿ, ಭುವನ್ ಕರ್ಕೇರ, ಚಂದ್ರಕಲಾ ಡಿ.ರಾವ್, ಶಾಂತಳಾ ಗಟ್ಟಿ, ಶಶಿಕಲಾ, ಮೀನಾ ಟೆಲ್ಲಿಸ್, ಉದಯ ಆಚಾರ್ಯ, ರಾಬಿನ್, ಫಯಾಝ್ ಅಮ್ಮೆಮ್ಮಾರ್, ಇಸ್ಮಾಯೀಲ್, ನಜೀಬ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News