ಅಬ್ದುಲ್ ಕರೀಂ ಸಾಹೇಬ್

Update: 2022-09-08 18:11 GMT

ಮಂಗಳೂರು, ಸೆ.8: ಮಂಜೇಶ್ವರ ಸಮೀಪದ ಉಪ್ಪಳ ನಯಾ ಬಝಾರ್ ನಿವಾಸಿ ಅಬ್ದುಲ್ ಕರೀಂ ಸಾಹೇಬ್ (90) (ಪೈಲ್ವಾನ್ ಕರೀಂ ಬಾಯ್) ಬುಧವಾರ ಮಂಗಳೂರಿನ ತನ್ನ ಸ್ವಗೃಹದಲ್ಲಿ ನಿಧನರಾದರು.

ಪತ್ನಿ, 6 ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಕುಸ್ತಿಪಟುವಾಗಿದ್ದ ಅಬ್ದುಲ್ ಕರೀಂ ಸಾಹೇಬ್ 1962ರಲ್ಲಿ  ಮಿ.ಬಾಂಬೆ ಪ್ರಶಸ್ತಿ ಪಡೆದಿದ್ದರು. ಲಂಡನ್‌ನ ಶಿಪ್ಪಿಂಗ್ ಕಂಪೆನಿಯೊಂದರಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಅವರು ಉಪ್ಪಳದ ಹನಫಿ ಜಮಾಅತ್‌ನ ಅಭಿವೃದ್ಧಿಗೂ ಶ್ರಮಿಸಿದ್ದರು.

ಗುರುವಾರ ಉಪ್ಪಳದ ಹನಫಿ ಜಮಾಅತ್‌ ಮಸೀದಿ ವಠಾರದಲ್ಲಿ ದಫನ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ