ಬೆಂಗಳೂರು | ಪೊಲೀಸರ ಲಾಠಿ ಏಟಿಗೆ ವ್ಯಕ್ತಿ ಬಲಿ: ಆರೋಪ

Update: 2022-09-25 18:21 GMT
 ಬಲರಾಮ - ಮೃತ ವ್ಯಕ್ತಿ

ಬೆಂಗಳೂರು, ಸೆ.25: ವ್ಯಕ್ತಿಯೊರ್ವನನ್ನು ಪೊಲೀಸರು ಗುರಿಯಾಗಿಸಿಕೊಂಡು ಲಾಠಿಯಿಂದ ಹಲ್ಲೆ ನಡೆಸಿದ ಪರಿಣಾಮ ಆತ ತೀವ್ರ ಗಾಯಗೊಂಡು ಮೃತಪಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ.

ಉತ್ತರ ತಾಲೂಕಿನ ಸೊಂಡೆಕೊಪ್ಪ ಗ್ರಾಮದ ನಿವಾಸಿ ಬಲರಾಮ(35) ಎಂಬುವರು ಪೊಲೀಸರ ದೌರ್ಜನ್ಯದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.

ಸೆ.19ರಂದು ಬಲರಾಮ ದೇವಸ್ಥಾನಕ್ಕೆ ಹೋಗಿ ಬರೋದಾಗಿ ಹೇಳಿ ಮನೆಯಿಂದ ಹೊರಟಿದ್ದ. ಈ ವೇಳೆ ಮಾದನಾಯಕನಹಳ್ಳಿ ಠಾಣೆಯ ಪೇದೆಗಳಾದ ವಿಜಯ್‍ಕುಮಾರ್, ಜನಾರ್ದನ್ ಎಂಬುವರು ಬಲರಾಮ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. 

ಅಲ್ಲದೆ, ಪೊಲೀಸ್ ವಾಹನದಲ್ಲಿ ಬಂದಿದ್ದ ಪೇದೆಗಳು ಹಲ್ಲೆ ನಡೆಸಿದ್ದು, ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News