ಅಂದು ಪೊಯ್ಯತ್ತಬೈಲ್ ನಿಧನಕ್ಕೆ ಎಸ್.ವೈ.ಎಸ್. ಸಂತಾಪ

Update: 2022-10-03 04:14 GMT

ಮಂಗಳೂರು : ಇಪ್ಪತ್ತೈದು ವರ್ಷಗಳಿಂದ ಸೊಂಟದ ಕೆಳಗೆ ಸಂಪೂರ್ಣ ನಿಶ್ಚಲಗೊಂಡು ಮಲಗಿದ್ದಲ್ಲೇ ಇದ್ದು ಧಾರ್ಮಿಕ ಬೋಧನಾ ಚಟುವಟಿಕೆಗಳಲ್ಲಿ ಅಂತರ್ಜಾಲ ಮಾಧ್ಯಮದ ಮೂಲಕ ಸೇವೆ ಮಾಡುತ್ತಿದ್ದ ಅಂದು ಪೊಯ್ಯತ್ತಬೈಲ್(43) ಅವರ ನಿಧನಕ್ಕೆ ಸುನ್ನೀ ಯುವಜನ ಸಂಘ ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಸಂತಾಪ ಸೂಚಿಸಿದ್ದಾರೆ.

ಸದಾ ಸ್ಪೂರ್ತಿಯಾಗಿದ್ದ ಅಂದು ಪೊಯ್ಯತ್ತಬೈಲ್, ಲಭ್ಯವಿರುವ ಅವಕಾಶಗಳನ್ನು ಬಳಸಿ ದ‌ಅ್‌ವಾ ರಂಗದಲ್ಲಿ ಪ್ರೀತಿ, ಅಭಿಮಾನವನ್ನು ಗಳಿಸಿದ ಅಪೂರ್ವ ಸೌಭಾಗ್ಯವಂತನಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ಅವರ ಹೆಸರಲ್ಲಿ ಖುರ್‌ಆನ್, ತಹ್‌ಲೀಲ್ ಹದ್ಯಾ ಮಾಡಿ ಪ್ರಾರ್ಥಿಸುವಂತೆ ಹಾಗೂ ಅವರಿಗಾಗಿ ಮಯ್ಯಿತ್ ನಮಾಝ್ ಮಾಡುವಂತೆ ‌ಎಸ್.ವೈ.ಎಸ್. ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News