ಮೂಡುಬಿದಿರೆ: ಪತ್ರಿಕಾ ವಿತರಕರಿಗೆ ಗೌರವಾರ್ಪಣೆ

Update: 2022-10-28 03:19 GMT

ಮೂಡುಬಿದಿರೆ: ಇಲ್ಲಿನ ಪ್ರಮುಖ ಪತ್ರಿಕಾ ವಿತರಣೆ ಸಂಸ್ಥೆಯಾದ ಪೈ ಏಜೆನ್ಸೀಸ್ ವತಿಯಿಂದ ಮನೆ-ಮನೆಗೆ ಪತ್ರಿಕೆಗಳನ್ನು ವಿತರಿಸುತ್ತಿರುವ 13 ಮಂದಿ ಪತ್ರಿಕಾ ವಿತರಕರನ್ನು ದೀಪಾವಳಿ ಅಂಗವಾಗಿ ಬುಧವಾರ ಗೌರವಿಸಲಾಯಿತು.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ.ಆರ್.ಪಂಡಿತ್ ಉದ್ಘಾಟಿಸಿ, ಮಾತನಾಡಿ ಪತ್ರಿಕಾ ವಿತರಣೆಯು ಅತ್ಯಂತ ಕ್ಲಿಷ್ಟಕರವಾದ ಕೆಲಸ. ಅದನ್ನು ದಶಕಗಳಿಂದ ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸಿ ಕ್ಲಪ್ತ ಸಮಯಕ್ಕೆ ಓದುಗರಿಗೆ ಮುಟ್ಟಿಸುವ ಕೆಲಸವನ್ನು ಬದ್ಧತೆಯಿಂದ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ವಾಸ್ತುತಜ್ಞ ರಾಘವೇಂದ್ರ ಭಂಡಾರ್ಕರ್ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು. 

ದಯಾನಂದ ಪೈ, ಉಷಾ ಡಿ ಪೈ ದಂಪತಿ ಪತ್ರಿಕಾ ವಿತರಕರಿಗೆ ರೈನ್‌ ಕೋಟ್, ನಗದು ಪುರಸ್ಕಾರದೊಂದಿಗೆ ಗೌರವಿಸಿದರು.

ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯೆ ಸ್ವಾತಿ ಪ್ರಭು, ಎಸ್‌ಎನ್‌ಎಂ ಪಾಲಿಟೆಕ್ನಿಕ್ ಉಪನ್ಯಾಸಕ ಸುರೇಶ್ ಭಂಡಾರಿ, ಪತ್ರಕರ್ತ ಬಿ.ಸೀತಾರಾಮ ಆಚಾರ್ಯ ಭಾಗವಹಿಸಿ ಶುಭ ಹಾರೈಸಿದರು. ದಯಾನಂದ ಪೈ ಸ್ವಾಗತಿಸಿದರು. ಉಷಾ ಡಿ ಪೈ ಅತಿಥಿಗಳನ್ನು ಗೌರವಿಸಿದರು.

Similar News