×
Ad

ಮಂಗಳೂರು: ಕೆನರಾ ಕಾಲೇಜು ತುಳು ಸಂಘದ ವಿದ್ಯಾರ್ಥಿಗಳಿಂದ ಭತ್ತದ ಕಟಾವು

Update: 2022-11-08 22:36 IST

ಮಂಗಳೂರು: ಪೂರ್ವಜರ ಕಾಲದಿಂದಲೇ ಬೆಳೆದು ಬಂದಂತಹ ಕೃಷಿಯ ಪರಂಪರೆಯನ್ನು ಮುಂದುವರಿಸಿ ಕೊಂಡು ಹೋಗುವ ಮಹತ್ತರ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ. ನಮ್ಮ ತಾಯಿಬೇರಾದ ಕೃಷಿಯನ್ನು ವಿದ್ಯಾರ್ಥಿಗಳು ಮರೆಯದೆ ಅದರ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಯೋಗೀಶ್ ಕಲಸಡ್ಕ ಹೇಳಿದರು.

ಕೆನರಾ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಕಾಲೇಜಿನ ತುಳು ಸಂಘವು ಆಯೋಜಿಸಿದ ಭತ್ತದ ಕಟಾವಿನ ಕಾರ್ಯದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ತುಳು ಸಂಘದ ಮೂವತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ರೈತರ ದುಡಿಮೆಯ ಮಹತ್ವವನ್ನು ಪ್ರಾಯೋಗಿಕವಾಗಿ ಅರಿತುಕೊಂಡರು. ಕಾಲೇಜಿನ ತುಳು ಸಂಘದ ಸಂಯೋಜಕಿ ಸವಿತಾ ಡಿ.ಕೆ ಅವರ ಮಾರ್ಗದರ್ಶನದಲ್ಲಿ ಕಳಸಡ್ಕದ ಪ್ರಗತಿಪರ ಯಶಸ್ವಿ ಕೃಷಿಕ ನೋಣಯ್ಯ ಬಂಗೇರ ಇವರ ಭತ್ತದ ಗದ್ದೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ವಿದ್ಯಾರ್ಥಿಗಳು ತೊಡಗಿಸಿಕೊಂಡು ಭತ್ತ ಕಟಾವಿನ ಕಾರ್ಯದಲ್ಲಿ ಕೈಜೋಡಿಸಿದರು.

ಸ್ಥಳೀಯರಾದ ದಯಾನಂದ ಪೂಜಾರಿ ಕೌಡೋಡಿಗುತ್ತು,  ಪುಷ್ಪರಾಜ ಶೆಟ್ಟಿ,  ಗಂಟರಬೆಟ್ಟು, ಚೆನ್ನಪ್ಪ ಮೂಲ್ಯ, ಭವಾನಿ ನೋಣಯ್ಯ ಬಂಗೇರ ಅವರು ಸಹಕರಿಸಿದರು.

Similar News