ಹಾಲಿನ ದರ ಹೆಚ್ಚಳ ತೀರ್ಮಾನವನ್ನು ಕೆಎಂಎಫ್ ಕೈ ಬಿಡಬೇಕು: ಯು.ಟಿ.ಖಾದರ್

Update: 2022-11-16 06:11 GMT

ಮಂಗಳೂರು,ನ.16; ಹಾಲಿನ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆಯುವ ತೀರ್ಮಾನ ಆದುದರಿಂದ ಈ ತೀರ್ಮಾನವನ್ನು ಕೆಎಂಎಫ್ ಕೈ ಬಿಡಬೇಕು ಮತ್ತು ಸರಕಾರ ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಶಾಸಕ ಹಾಗೂ ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಹಾಲಿನ ದರ ಹೆಚ್ಚಳ ಕ್ಕೆ ಕಾಂಗ್ರೆಸ್ ನ ವಿರೋಧವಿದೆ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಹೈನುಗಾರರಿಗೆ ಮತ್ತು ಗ್ರಾಹಕರಿಗೆ ಸಹಾಯ ಆಗುವ ರೀತಿಯಲ್ಲಿ ಹಾಲಿನ ದರ ನಿಗದಿ ಪಡಿಸಿತ್ತು. ಹಾಲು ಅಗತ್ಯ ವಸ್ತು ಆದುದರಿಂದ ಈ ಸಂದರ್ಭದಲ್ಲಿ ಬೆಲೆ ಏರಿಕೆ ಸರಿಯಲ್ಲ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಆದರೆ ತಳ ಮಟ್ಟದ ಅಧಿಕಾರಿಗಳು ಈ ಸೂಚನೆ ಪಾಲಿಸುತ್ತಿಲ್ಲ.ಆರು ತಿಂಗಳು ಒಂದು ಕಡೆ ವಾಸ ಮಾಡುವ ನಿಗದಿತ ವಯೋಮಾನದ ವ್ಯಕ್ತಿಗೆ  ಚುನಾವಣಾ ಪಟ್ಟಿಯಲ್ಲಿ ಸೇರ್ಪಡೆ ಮಾಡಬಹುದು. ಮುಂದೆ ಇದೇ ರೀತಿ ಆಧಾರ್  ಕಡ್ಡಾಯ ಎಂದು ಬಲವಂತ ಮಾಡಿದರೆ ಈ ಬಗ್ಗೆ ದೂರು ದಾಖಲಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ರದ್ದಾಗಿಲ್ಲ ಅದು ಹೆಜಮಾಡಿಗೆ ಶಿಫ್ಟ್ ಆಗಿದೆ. ಇದು ಹೋರಾಟಗಾರರ ಒಂದು ಹಂತದ ಜಯ. ಈ ಹೋರಾಟದ ಸಂದರ್ಭದಲ್ಲಿ ಅಲ್ಲಿಗೆ ಹೋಗದೆ ಇರುವವರು ರಾಜಕೀಯ ಲಾಭದ ಹೇಳಿಕೆ ನೀಡುವುದು ಸರಿಯಲ್ಲ. ಮುಂದಿನ ಸಮಸ್ಯೆ ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚು ವರಿ ಹೊರೆ ಕಡಿತಗೊಳಿಸಲು ನಿಯಮ ರೂಪಿಸಬೇಕು. 2014ರಿಂದ ಎಂಟು ವರ್ಷ ಯಾರ ಅಧಿಕಾರದಲ್ಲಿದ್ದರು. ಅವರು ಟೋಲ್ ಗೇಟ್ ರದ್ದು ಪಡಿಸಲು ಏಕೆ ಸಾಧ್ಯವಾಗಿಲ್ಲ. ಬಂಟ್ವಾಳ ದಿಂದ  ಸುರತ್ಕಲ್ ನಡುವೆ ಶೇ.75 ಎನ್ ಎಚ್ಎಐ ಪಾಲು ಮತ್ತು ಉಳಿದ ಪಾಲು ಎನ್ ಎಂಪಿಟಿ ಪಾಲಿನ ಪ್ರಕಾರ ರಸ್ತೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಅದರ ಪ್ರಕಾರ ಈಗ ಟೋಲ್ ಗೇಟ್ ಮಾಡುವ ಅಗತ್ಯ ವಿಲ್ಲ ,ರದ್ದು ಮಾಡಬಹುದು. ಏಕೆಂದರೆ ಇದು  ಖಾಸಗಿ ಸಂಸ್ಥೆಗಳ ಯೋಜನೆಯಲ್ಲ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ದೇಶಕ್ಕೆ ಕೊಡುಗೆ ನೀಡಿದವರ ಪ್ರತಿಮೆ ಸ್ಥಾಪಿಸಲು ಅವಕಾಶವಿದೆ ಈ ಹಿನ್ನಲೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡ, ಟಿಪ್ಪು ಪ್ರತಿಮೆ ಸ್ಥಾಪನೆಗೆ ಕೆಲವರು ಪ್ರಸ್ತಾಪ ಮಾಡಿರಬಹುದು ಇದು ತಪ್ಪಲ್ಲ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮುಖಂಡರಾದ ಮಮತಾ ಗಟ್ಟಿ ,ಕಾಂಗ್ರೆಸ್ ಮೋಹನ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು. 

ಇದನ್ನೂ ಓದಿ: ಹಲ್ಲೆ ಪ್ರಕರಣ: ಮುಹಮ್ಮದ್ ನಲಪಾಡ್ ವಿರುದ್ಧದ ವಿಚಾರಣೆ ಮುಂದುವರಿಕೆಗೆ ಕೋರ್ಟ್ ಆದೇಶ

Similar News