ಅಮಾಸೆಬೈಲು: ನೇಣು ಬಿಗಿದು ಆತ್ಮಹತ್ಯೆ
Update: 2022-11-24 16:17 GMT
ಅಮಾಸೆಬೈಲು: ಚಿಕಿತ್ಸೆಯ ಬಳಿಕವೂ ತನಗಿದ್ದ ಲಿವರ್ ಹಾಗೂ ಕರುಳಿನ ಸಮಸ್ಯೆ ಗುಣವಾಗದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಶೇಡಿಮನೆ ಗ್ರಾಮದ ಗುಡ್ಡೆಯಂಗಡಿ ಅರಸಮ್ಮಕಾನ್ ರಾಜು ಪೂಜಾರಿ (54) ಎಂಬವರು ಬುಧವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.