ಮುದುಂಗಾರುಕಟ್ಟೆ: ನವೀಕೃತ ಮಸೀದಿ ಉದ್ಘಾಟನೆ

Update: 2022-11-25 16:35 GMT

ಕೊಣಾಜೆ: ಹಿದಾಯತುಲ್ ಇಸ್ಲಾಂ ಜುಮಾ ಮಸ್ಜಿದ್ ಮುದುಂಗಾರುಕಟ್ಟೆ ಇದರ ನವೀಕೃತ ಮಸ್ಜಿದ್ ನ  ಉದ್ಘಾಟನಾ ಸಮಾರಂಭವು ಶುಕ್ರವಾರ ನಡೆಯಿತು.

ಖಾಝಿ ಅಸ್ಸಯ್ಯಿದ್ ಖುರ್ರತುಸ್ಸಾದಾತ್ ತಂಙಳ್ ಅವರು ನವೀಕೃತ ಮಸ್ಜಿದ್ ನ ಉದ್ಘಾಟನೆಯನ್ನು ನೆರವೇರಿಸಿ ಶುಭಹಾರೈಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶೈಖುನಾ ಪಾತೂರು ಉಸ್ತಾದ್, ಖಾಝಿ ಪಾತೂರು ಅವರು ಉದ್ಘಾಟಿಸಿ, ಮುದುಂಗಾರುಕಟ್ಟೆಯ ಹಿದಾಯತುಲ್ ಇಸ್ಲಾಂ ಜುಮಾ ಮಸ್ಜಿದ್ ನ ನಿರ್ಮಾಣಕ್ಕೆ ಪರಿಶ್ರಮ ಪಟ್ಟ, ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಪ್ರಾರ್ಥಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಯ್ಯಿದ್ ಜಲಾಲುದ್ದೀನ್ ಜಮಲುಲ್ಲೈಲಿ ತಂಙಳ್ ಪಾತೂರು ಅವರು ವಹಿಸಿದ್ದರು. ಶೈಖುನಾ  ವಾಲೆಮಂಡೂವು ಉಸ್ತಾದ್ ಅವರು ದುವಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶೈಖುನಾ ಬಾಳೆಪುಣಿ ಉಸ್ತಾದ್, ಮುದುಂಗಾರುಕಟ್ಟೆ ಮಸ್ಜಿದ್ನ ಖತೀಬರಾದ ಹೈದರ್ ಅಲಿ ಹಿಮಮಿ ಮುದುಂಗಾರು ಕಟ್ಟೆ ಹಿದಾಯತುಲ್ ಇಸ್ಲಾಂ ಜುಮಾ ಮಸ್ಜಿದ್ ನ ಅಧ್ಯಕ್ಷರಾದ ಸಿ.ಎಚ್.ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಯು.ಎಮ್, ನಿರ್ಮಾಣ ಸಮಿತಿ ಕಾರ್ಯದರ್ಶಿ ಅಬ್ಬಾಸ್ ನಾರ್ಯ, ಮುಖಂಡರಾದ ಇಬ್ರಾಹಿಂ ನಡುಪದವು, ಚಂದ್ರಹಾಸ್ ಆಳ್ವ, ಅಂದು ಕುಂಞಿ ಮುದುಂಗಾರುಕಟ್ಟೆ, ಎಸ್.ಕೆ.ಅಬ್ದುಲ್ ಖಾದರ್ ಹಾಜಿ, ಹೈದರ್ ಕೈರಂಗಳ, ಅಬ್ದುಲ್ ಜಲೀಲ್ ಮೋಂಟುಗೋಳಿ, ನಾಸೀರ್ ಎನ್ ಎಸ್ ನಡುಪದವು, ಅರುಣ್ ಡಿಸೋಜ, ರಮೇಶ್ ಶೇಣವ, ರಫೀಕ್ ಮುದುಂಗಾರುಕಟ್ಟೆ ಜಗದೀಶ್ ಪಲಾಯಿ ಹಾಗೂ ವಿವಿಧ ಧಾರ್ಮಿಕ ಕ್ಷೇತ್ರದ ಗುರುಗಳು, ಮುಖಂಡರು ಉಪಸ್ಥಿತರಿದ್ದರು.

ಮಸ್ಜಿದ್ ನಿರ್ಮಾಣ ಸಮಿತಿ ಕಾರ್ಯದರ್ಶಿ ಅಬ್ಬಾಸ್ ನಾರ್ಯ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

Similar News