ಉಳ್ಳಾಲ | ಬಾವಿಯಲ್ಲಿ ಯುವಕನ ಮೃತದೇಹ ಪತ್ತೆ: ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲು

Update: 2022-12-06 08:24 GMT

ಉಳ್ಳಾಲ: ಇಲ್ಲಿ‌ನ ತೊಕ್ಕೊಟ್ಟು ಕಾಪಿಕಾಡು ಸಮೀಪ ಮನೆಯೊಂದರ ಬಾವಿಯಲ್ಲಿ ಪತ್ತೆಯಾದ ಹಾಸನ ಅರಸೀಕೆರೆ ನಿವಾಸಿ ಮಹಾಂತೇಶ್ ಬಗೆ ಅಸ್ವಾಭಾವಿಕ ಸಾವು  ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಸ್ ಪೋಟ್೯ ರಿನೀವಲ್ ಗಾಗಿ ಎಂದು ಮನೆ ಮಂದಿಯಲ್ಲಿ ಕಾರಣ ನೀಡಿ ಮಂಗಳೂರಿಗೆ  ನ.30 ರಂದು ಮಂಗಳೂರಿಗೆ ಬಂದವರು, ತೊಕ್ಕೊಟ್ಟು ಲಾಡ್ಜ್ ನಲ್ಲಿ ತಂಗಿದ್ದರು. ಡಿ.2 ಶುಕ್ರವಾರ ಲಾಡ್ಜ್ ನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಆಕೆಯ‌ ಸಹೋದರಿ ಉಳ್ಳಾಲ ಠಾಣೆಯಲ್ಲಿ ಶನಿವಾರ ನಾಪತ್ತೆ ದೂರು ನೀಡಿದ್ದರು. ರವಿವಾರ ಅವರ ಮೃತದೇಹ ಬಾವಿಯಲ್ಲಿ ಪತ್ತೆ ಆಗಿತ್ತು.

ಮದುವೆ ವಿಚಾರಕ್ಕೆ ಸಂಬಂಧಿಸಿ ಮಹಾಂತೇಶ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮೈಸೂರಿನಲ್ಲಿ ಮದುವೆಯಾಗಲೆಂದು ಯುವತಿಯನ್ನು ನೋಡಿದ್ದು, ಆಕೆಯನ್ನು ಮನೆ ಮಂದಿ ತಿರಸ್ಕರಿಸಿದ್ದರು. ಇದರ ಬಳಿಕ ಖಿನ್ನತೆಗೆ ಒಳಗಾಗಿದ್ದ ಮಹಾಂತೇಶ್, ಹಾಸನದ ಹೆತ್ತವರಲ್ಲಿ ಪಾಸ್ ಪೋಟ್೯ ರಿನೀವಲ್ ಗಾಗಿ ಮಂಗಳೂರಿಗೆ ತೆರಳುವುದಾಗಿ ಸುಳ್ಳು ಹೇಳಿ ಬಂದಿದ್ದರು ಎನ್ನಲಾಗಿದೆ.

ನ.30 ರಂದು ಮಂಗಳೂರಿಗೆ ಬಂದವರು, ತೊಕ್ಕೊಟ್ಟು ಲಾಡ್ಜ್ ನಲ್ಲಿ ತಂಗಿದ್ದರು.  ಅಲ್ಲಿಂದ ಮೊಬೈಲ್, ಲಾಡ್ಜ್ ಕೀ ಎಲ್ಲವನ್ನೂ ಟೇಬಲಲ್ಲೇ ಬಿಟ್ಟು ಮಹಾಂತೇಶ್ ಏಕಾಏಕಿ ಹೊರಗೆ ತೆರಳಿದ್ದಾರೆ . ಪ್ರಕರಣದಲ್ಲಿ ಮಹಾಂತೇಶ್ ದೂರದ ಹಾಸನದಿಂದ ತೊಕ್ಕೊಟ್ಟು ಗೆ ಬಂದು ಉಳಿದಿರಲು ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಪ್ರಕರಣ ಇತ್ಯರ್ಥ ಪಡಿಸಲಾಗುವುದು  ಎಂದು ಉಳ್ಳಾಲದ ಠಾಣಾಧಿಕಾರಿ ಸಂದೀಪ್ ತಿಳಿಸಿದ್ದಾರೆ.

Similar News