ಟೇಬಲ್ ಟೆನ್ನಿಸ್ : ಶ್ರೀ ಚೈತನ್ಯ ಟೆಕ್ನೋ ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2022-12-06 17:03 GMT

ಮಂಗಳೂರು, ಡಿ.6: ಸಿಬಿಎಸ್‌ಇ ಬೋರ್ಡ್ ಆಯೋಜಿಸಿದ್ದ ಕ್ಲಸ್ಟರ್ ಕ್ರೀಡಾಕೂಡದಲ್ಲಿ ಕೊಟ್ಟಾರ ಚೌಕಿಯ ಚೈತನ್ಯ ಟೆಕ್ನೋ ಶಾಲೆಯು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ರಾಷ್ಟ್ರಮಟ್ಟದ ಪಂದ್ಯಾಟವು ಈ ತಿಂಗಳಲ್ಲಿ ಆಂಧ್ರಪ್ರದೇಶದ ಈಸ್ಟ್ ಗೋದಾವರಿಯಲ್ಲಿ ನಡೆಯಲಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಬೆಂಗಳೂರಿನ ಶ್ರೀರವಿಶಂಕರ್ ವಿದ್ಯಾಮಂದಿರದಲ್ಲಿ ನಡೆದ ಕ್ಲಸ್ಟರ್ 8- ರಾಜ್ಯಮಟ್ಟದ ಸಿಬಿಎಸ್‌ಇ ಟೇಬಲ್ ಟನಿಸ್ ಪಂದ್ಯಾಟದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ನಹಲ್ಲಾ ಫಾತಿಮಾ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ, ನರೇಂದ್ರ ಕಿಣಿ ಕಂಚಿನ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

19ರ ವಯೋಮಿತಿಯ ಬಾಲಕಿಯರ ಟೇಬಲ್ ಟೆನ್ನಿಸ್ ತಂಡಗಳಲ್ಲಿ ನಹಲ್ಲಾ ಫಾತಿಮಾ ಏಯಜೆ ಶುರನ್, ಆರಾಧ್ಯ ಶೆಟ್ಟಿ ಪ್ರಥಮ ಸ್ಥಾನ ಮತ್ತು 19ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ನರೇಂದ್ರಕಿಣಿ, ಆರುಶ್ ಶೆಟ್ಟಿ, ಮಿಥಿರನ್ ಎ. ಸರ್ಮಥ್ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Similar News