ಬೆಂಗಳೂರು | ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಮೂವರ ಬಂಧನ

Update: 2022-12-30 14:16 GMT

ಬೆಂಗಳೂರು, ಡಿ.30: ಇತರ ಧರ್ಮಿಯರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುತ್ತಿದ್ದ ಆರೋಪದಡಿ ಮೂವರು ಆರೋಪಿಗಳನ್ನ ಜೆ.ಜೆ. ನಗರ ಪೊಲೀಸರು ಬಂಧಿಸಿರುವುದು ವರದಿಯಾಗಿದೆ. 

ಬಂಧಿತರನ್ನು ಆಂಧ್ರಪ್ರದೇಶ ಮೂಲದ ವಿಜಯ್, ಶೃತಿ ಹಾಗೂ ನೆಲ್ಸನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕಳೆದ ನ. 28ರಂದು ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ‘ನೀವು ಕ್ರಿಸ್ಮಸ್ ಆಚರಿಸಿದರೆ, ನಿಮ್ಮ ಪಾಪಗಳು ವಿಮೋಚನೆಯಾಗುತ್ತದೆ. ಜೀಸಸ್ ನಿಮಗೆ ಒಳ್ಳೆಯದು ಮಾಡುತ್ತಾನೆ’ ಎಂದು ತೆಲುಗು ಭಾಷೆಯ ಕರಪತ್ರ ಹಂಚುತ್ತಿದ್ದ ಆರೋಪವನ್ನು ಹೊಂದಿದ್ದಾರೆ. 

ಮಾತ್ರವಲ್ಲದೇ ಹಣ, ಸವಲತ್ತುಗಳ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಸೆಳೆಯುತ್ತಿದ್ದದನ್ನು ಗಮನಿಸಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಜೆ.ಜೆ.ನಗರ ಠಾಣಾ ಪೊಲೀಸರು ವಿಜಯ್ ಸೇರಿ ಎಲ್ಲರನ್ನೂ ವಶಕ್ಕೆ ಪಡೆದಿದ್ದು, ಕರ್ನಾಟಕ ರಾಜ್ಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News