ಬಜ್ಪೆ: ಅಪಘಾತದಲ್ಲಿ ಮೂವರಿಗೆ ಗಾಯ
Update: 2023-01-01 13:12 GMT
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾಮಿಲಪದವು ಎಂಬಲ್ಲಿ ರವಿವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮೂವರಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೇಮಂತ್ ಎಂಬವರು ತನ್ನ ಬೈಕ್ನಲ್ಲಿ ಕಾರ್ತಿಕ್ ಎಂಬವರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಸ್ವಾಮಿಲಪದವು ಎಂಬಲ್ಲಿ ಕಾರೊಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ತಿಪ್ಪಣ್ಣ ಎಂಬವರಿಗೆ ಢಿಕ್ಕಿ ಹೊಡೆದ ಬಳಿಕ ಹಠಾತ್ ಬ್ರೇಕ್ ಹಾಕಿತು ಎನ್ನಲಾಗಿದೆ.
ಈ ವೇಳೆ ಹಿಂದಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಸವಾರ ನೇಮಂತ್, ಸಹಸವಾರ ಕಾರ್ತಿಕ್ ಕೆಳಕ್ಕುರುಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪಘಾತದಿಂದ ಪಾದಚಾರಿ ತಿಪ್ಪಣ್ಣ, ಸವಾರ ನೇಮಂತ್, ಸಹಸವಾರ ಕಾರ್ತಿಕ್ಗೆ ಗಾಯಗಳಾಗಿದ್ದು, ಬೈಕ್ ಸವಾರ ನೀಡಿದ ದೂರಿನ ಮೇರೆಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.