ಶಿಬಾಜೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಜ.23ರಂದು ಪ್ರತಿಭಟನೆ

Update: 2023-01-22 04:04 GMT

ಮಂಗಳೂರು,ಜ.21: ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ಕೂಲಿ ಕಾರ್ಮಿಕರು ದಲಿತರ ಮೇಲೆ ದೌರ್ಜನ್ಯ ಖಂಡಿಸಿ ದಲಿತ ಸಂಘಟನೆಗಳ ಮೂಲಕ ಜ. 23 ರಂದು ಬೆಳಿಗ್ಗೆ ಧರ್ಮ ಸ್ಥಳ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಯಲಿದೆ ಎಂದು ದಲಿತ ಸಂಘಟನೆಗಳ  ಮೈಸೂರು ವಿಭಾಗದ ಸಂಚಾಲಕ ಅಶೋಕ್ ಕೊಂಚಾಡಿ ಹಾಗೂ ಮುಗೇರರ ಸಂಘಟನೆಯ ರಾಜ್ಯ ಅಧ್ಯಕ್ಷ ಸುಂದರ ಮೇರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಶಿಬಾಜೆಯಲ್ಲಿ ಯುವಕನನ್ನು ಮಾರಣಾಂತಿಕ ವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಬಳಿಕವೂ ಅಲ್ಲಿನ ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ. ಈ ರೀತಿಯ ಭಯದ ವಾತವರಣದ ವಿರುದ್ಧ ಸೂಕ್ತ ಕ್ರಮ ಕ್ಕಾಗಿ ಆಗ್ರಹಿಸಿ ಜ.24ರಂದು ಬೆಳಗ್ಗೆ ನೇತ್ರಾವತಿ ಬಳಿಯಿಂದ ಧರ್ಮ ಸ್ಥಳ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅಶೋಕ್ ಕೊಂಚಾಡಿ ತಿಳಿಸಿದ್ದಾರೆ.

Similar News