ಬೆಂಗಳೂರು | ರಸ್ತೆ ಕಾಮಗಾರಿ ಅವಾಂತರ: ಸ್ಕೂಟರ್ ಅಪಘಾತಕ್ಕೀಡಾಗಿ ಮಹಿಳೆ ಮೃತ್ಯು

Update: 2023-01-25 07:30 GMT

ಬೆಂಗಳೂರು, ಜ.25: ರಸ್ತೆ ಕಾಮಗಾರಿ ಕಾರಣ ಏಕಮುಖ ರಸ್ತೆಯಲ್ಲಿ ವಾಹನ ಸಂಚರಿಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಎಂಬಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಖಾಸಗಿ ಶಾಲೆಯ ಉದ್ಯೋಗಿಯಾಗಿರುವ ನಳಿನಾ ಮೃತಪಟ್ಟ ಮಹಿಳೆ. ನಳಿನಾ ಇಂದು ಬೆಳಗ್ಗೆ ತನ್ನ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. 

ಇದನ್ನೂ ಓದಿ: ​ಗೋದ್ರೋತ್ತರ ಗಲಭೆಯಲ್ಲಿ 17 ಮಂದಿ ಅಲ್ಪಸಂಖ್ಯಾತರ ಹತ್ಯೆ: 22 ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಚಿಕ್ಕಗೊಲ್ಲರಹಟ್ಟಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರು ಅನಿವಾರ್ಯವಾಗಿ ಒನ್ ವೇ ರಸ್ತೆ ಬಳಸುತ್ತಿದ್ದಾರೆ. ಅದೇರೀತಿ ನಳಿನಾ ದ್ವಿಚಕ್ರ ವಾಹನದಲ್ಲಿ ಒನ್ ವೇಗೆ ಪ್ರವೇಶಿಸುತ್ತಿದ್ದಂತೆ ಕ್ಯಾಂಟರ್ ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗುರುಳಿದ ನಳಿನಾ ಮೇಲೆಯೇ ಕ್ಯಾಂಟರ್ ಹರಿದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Similar News