ನೌಶಾದ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ರಚಿಸುವ ಬಗ್ಗೆ ಸಮಾಲೋಚನ ಸಭೆ

Update: 2023-01-28 14:28 GMT

ಮಂಗಳೂರು: ಇತ್ತೀಚೆಗೆ ಅಗಲಿದ ಸಮಾಜ ಸೇವಕ ಮರ್ಹೂಂ ನೌಶಾದ್ ಹಾಜಿ ಸುರಲ್ಪಾಡಿಯ ಸ್ಮರಣಾರ್ಥ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ರಚಿಸುವ ಸಲುವಾಗಿ ಸಮಾಲೋಚನ ಸಭೆಯು ಶುಕ್ರವಾರ ನಗರದ ಅಲ್ ಇಹ್ಸಾನ್  ಮಸೀದಿಯ ಸಭಾಂಗಣದಲ್ಲಿ ಜರುಗಿತು.

ದಾರುಸ್ಸಲಾಂ ಎಜುಕೇಶನ್ ಸೆಂಟರ್ ಬೆಳ್ತಂಗಡಿ ಇದರ ಸಂಸ್ಥಾಪಕ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುಆಗೈದು ಸಭೆಯನ್ನು ಉದ್ಘಾಟಿಸಿದರು. ಟ್ರಸ್ಟ್ ರಚನೆಯ ಉದ್ದೇಶವನ್ನು ವಿವರಿಸಿದ ರಫೀಕ್ ಮಾಸ್ಟರ್, ನೂತನ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಹುಸೈನ್ ದಾರಿಮಿ ರೆಂಜಲಾಡಿ, ಮಾಜಿ ಮೇಯರ್ ಕೆ.ಅಶ್ರಫ್, ಉಸ್ಮಾನ್ ಏರ್ ಇಂಡಿಯಾ, ಇಸಾಕ್ ತೋಡಾರ್ ಅನುಸ್ಮರಣಾ ಮಾತುಗಳನ್ನಾಡಿದರು. ಆಸೀಫ್ ಆದರ್ಶ್ ಸುರಲ್ಪಾಡಿ ಪ್ರಸ್ತುತ ಯೋಜನೆಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಜಿಲ್ಲೆಯ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಉದ್ಯಮಿಗಳು ನೌಶಾದ್ ಹಾಜಿಯವರ ಅಭಿಮಾನಿಗಳು ಮತ್ತು ಸಹೋದರರಾದ ಜಲೀಲ್ ಮತ್ತು ಅಬ್ದುಲ್ ಸತ್ತಾರ್ ಭಾಗವಹಿಸಿದ್ದರು.

ಇಕ್ಬಾಲ್ ಬಾಳಿಲ ಸ್ವಾಗತಿಸಿದರು. ಡಾ.ಸಿದ್ದೀಕ್ ಅಡ್ಡೂರು ವಂದಿಸಿದರು. ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.

Similar News