×
Ad

ಮಂಗಳೂರು| ನ್ಯಾಯಾಲಯದ ಆವರಣದಲ್ಲೇ ವಕೀಲೆಗೆ ಕೊಲೆ ಬೆದರಿಕೆ: ಪ್ರಕರಣ ದಾಖಲು

Update: 2023-01-31 23:26 IST

ಮಂಗಳೂರು: ನಗರದ ಯುವ ವಕೀಲೆಯೊಬ್ಬರಿಗೆ ಮಂಗಳವಾರ ಅಪರಾಹ್ನ ನ್ಯಾಯಾಲಯದ ಆವರಣದಲ್ಲೇ ಅವಾಚ್ಯ ಶಬ್ದದಿಂದ ‌ಬೈದು ಜೀವ ಬೆದರಿಕೆಯೊಡ್ಡಿರುವುದಾಗಿ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.

ವಕೀಲೆ ರುಬಿಯಾ ಅಖ್ತರ್‌ಗೆ ಆರೋಪಿ ಹಮೀದ್ ಕಾವೂರು ಯಾನೆ ಮುಹಮ್ಮದ್ ‌ಹನೀಫ್ ಎಂಬಾತ ಮಂಗಳವಾರ ಅಪರಾಹ್ನ ಸುಮಾರು 3:30ಕ್ಕೆ ಜಾಮೀನು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಶಬ್ದದಿಂದ ಬೈದು ಕೋರ್ಟ್‌ಗೆ ಬಾರದ ಹಾಗೆ ಮಾಡುವೆ, ಕೈಕಾಲು ಪುಡಿಮಾಡುವೆ ಎಂದು  ಬೆದರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಂದರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News