ದ.ಕ. ಜಿಲ್ಲಾ ನೂತನ ಎಸ್ಪಿ ಡಾ. ವಿಕ್ರಮ್ ಅಮ್ಟೆ ಅಧಿಕಾರ ಸ್ವೀಕಾರ

Update: 2023-02-01 17:36 GMT

ಮಂಗಳೂರು: ದಕ್ಷಿಣ ಕನ್ನಡದ  ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ವಿಕ್ರಮ್ ಅಮ್ಟೆ ಬುಧವಾರ ಅಧಿಕಾರ ಸ್ವೀಕರಿಸಿದರು.

ರಾಜ್ಯ ಸರಕಾರ ದ.ಕ. ಜಿಲ್ಲಾ ಎಸ್ಪಿಯಾಗಿದ್ದ ಸೋನಾವಾನೆ ಋಷಿಕೇಶ್ ಭಗವಾನ್ ಅವರನ್ನು ಗುಪ್ತಚರ ಎಸ್ಪಿಯಾಗಿ ವರ್ಗಾಯಿಸಿತ್ತು. ಗುಪ್ತಚರ ಎಸ್ಪಿಯಾಗಿದ್ದ ವಿಕ್ರಮ್ ಅವರನ್ನು ದ.ಕ. ಎಸ್ಪಿಯಾಗಿ  ಮಂಗಳವಾರ ನಿಯೋಜಿಸಿತ್ತು.

ಎಸ್ಪಿ ವಿಕ್ರಮ್ ಅಮ್ಟೆ ಅವರು ಈ ಹಿಂದೆ  ದ.ಕ. ಮತ್ತು ಶಿವಮೊಗ್ಗದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿಯಾಗಿ, ಬೆಳಗಾವಿ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದಾರೆ

Similar News