ಉಪ್ಪಿನಂಗಡಿ: ಪಾದಚಾರಿಗೆ ಬೈಕ್ ಢಿಕ್ಕಿ; ಇಬ್ಬರಿಗೆ ಗಾಯ

Update: 2023-02-04 17:53 GMT

ಉಪ್ಪಿನಂಗಡಿ: ರಸ್ತೆ ದಾಟುತ್ತಿದ್ದ ಪಾದಚಾರಿಯೋರ್ವರಿಗೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಪಾದಚಾರಿ ಗಾಯಗೊಂಡ ಘಟನೆ ಉಪ್ಪಿನಂಗಡಿಯ ಪುಳಿತ್ತಡಿ ಸಮೀಪ ಗುರ್ಜಿ ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಗುರ್ಜಿ ನಿವಾಸಿ ದಿನೇಶ್ ಶೆಟ್ಟಿ ಗಾಯಗೊಂಡ ಪಾದಾಚಾರಿಯಾಗಿದ್ದು, ಬೈಕ್ ಸವಾರನ ಹೆಸರು ತಿಳಿದು ಬಂದಿಲ್ಲ. ದಿನೇಶ್ ಶೆಟ್ಟಿಯವರು ಉಪ್ಪಿನಂಗಡಿಯಿಂದ ಅಟೋ ರಿಕ್ಷಾದಲ್ಲಿ ಬಂದ ದಿನೇಶ್ ಅವರು ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಯಲ್ಲಿರು ಗುರ್ಜಿಯ ತನ್ನ ಮನೆ ಬಳಿ ಇಳಿದಿದ್ದು, ಮನೆಗೆ ಹೋಗಲು ರಸ್ತೆ ದಾಟುತ್ತಿದ್ದರು. ಈ ಸಂದರ್ಭ ಪೆರಿಯಡ್ಕ ಕಡೆಯಿಂದ ಪುಳಿತ್ತಡಿ ಕಡೆಗೆ ಹೋಗುತ್ತಿದ್ದ ಬೈಕ್ ಇವರಿಗೆ ಢಿಕ್ಕಿಯಾಗಿ, ಮಗುಚಿ ಬಿದ್ದಿದೆ. ಈ ಸಂದರ್ಭ ಬೈಕ್ ಸವಾರನೂ ರಸ್ತೆಗೆಸೆಯಲ್ಪಟ್ಟಿದ್ದು, ಪಾದಾಚಾರಿ ಹಾಗೂ ಬೈಕ್ ಸವಾರನಿಗೂ ಗಾಯಗಳಾಗಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Similar News