ಫೆ.10: ಕುದ್ರೋಳಿಯಲ್ಲಿ SKSMನಿಂದ 'ಆದರ್ಶ ಸಮ್ಮೇಳನ'
Update: 2023-02-08 05:45 GMT
ಮಂಗಳೂರು, ಫೆ.8: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ (SKSM) ಕುದ್ರೋಳಿ ಘಟಕದ ವತಿಯಿಂದ 'ಆದರ್ಶ ಸಮ್ಮೇಳನ'ವನ್ನು ಫೆ.10ರಂದು ಕುದ್ರೋಳಿಯ A1 ಭಾಗ್ ನಲ್ಲಿ ಆಯೋಜಿಸಲಾಗಿದೆ.
ಅಂದು ಮಗ್ರಿಬ್ ನಮಾಝ್ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಮೌಲವಿ ನಾಸಿರುದ್ದೀನ್ ರಹ್ಮಾನಿ, ಮೌಲವಿ ಹನೀಫ್ ಕಾಯಕ್ಕೋಡಿ ಹಾಗೂ ಮೌಲವಿ ಮುಸ್ತಫ ದಾರಿಮಿ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.