ಮಂಗಳೂರು | ದಕ್ಕೆ: ಎಚ್.ಐ.ಎಫ್. ಇಂಡಿಯಾ 'ಪ್ರಾಜೆಕ್ಟ್ ಬೂಂದ್' ಯೋಜನೆಯಡಿ ಕುಡಿಯುವ ನೀರಿನ ಘಟಕ ಸ್ಥಾಪನೆ

Update: 2023-03-01 06:43 GMT

ಮಂಗಳೂರು, ಮಾ.1: ಎಚ್.ಐ.ಎಫ್. ಇಂಡಿಯಾದ 'ಪ್ರಾಜೆಕ್ಟ್ ಬೂಂದ್' ಯೋಜನೆಯಡಿಯಲ್ಲಿ ನಗರದ ಮೀನು ವ್ಯಾಪಾರ ಸ್ಥಳವಾದ ದಕ್ಕೆಯಲ್ಲಿ ಸಾರ್ವಜನಿಕರಿಗೆ ಕುಡಿಯಲು ಶುದ್ಧ ಬಿಸಿ ಮತ್ತು ತಂಪು ನೀರು ಹೊಂದಿರುವಂತಹ ವಾಟರ್ ಡಿಸ್ಪೆನ್ಸರ್ ಅನ್ನು ದಕ್ಕೆ ಮೀನು ಮಾರಾಟ ಒಕ್ಕೂಟ ಸಹಕಾರದಿಂದ ಅಳವಡಿಸಲಾಯಿತು.

ಎಹ್ಸಾನ್ ಮಸೀದಿಯ ಇಮಾಮ್ ಮೌಲಾನ ಅಲ್ತಾಫ್ ದುಆ ಮೂಲಕ ವಾಟರ್ ಡಿಸ್ಪೆನ್ಸರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಾಷಾ ಹಸನಬ್ಬ, ಗುಜರಾತ್ ಮೂಲದ ಉದ್ಯಮಿ ಮೆಹಬೂಬ್, ಎಚ್.ಐ.ಎಫ್. ಇಂಡಿಯಾ ಅಧ್ಯಕ್ಷ ನಝೀಮ್ ಎ.ಕೆ. ಉಪಸ್ಥಿತರಿದ್ದರು.

ಮೀನುಗಾರಿಕೆ ಉಪ ನಿರ್ದೇಶಕ ಹರೀಶ್ ಕುಮಾರ್ ಡಿ.ಡಿ. ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮರ್ಹೂಂ ಎಸ್.ಎಂ.ಬಶೀರ್ ಅವರ ಸೇವೆ ಮತ್ತು ಸಮುದಾಯ ಮೇಲಿನ ಕಾಳಜಿಯನ್ನು ಸ್ಮರಿಸಲಾಯಿತು.

ರಿಝ್ವಾನ್ ಪಾಂಡೇಶ್ವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಎಚ್.ಐ.ಎಫ್. ಇಂಡಿಯಾ 'ಪ್ರಾಜೆಕ್ಟ್ ಬೂಂದ್' ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ಬೋರ್ ವೆಲ್, ನೀರಿನ ಪೈಪ್ ಲೈನ್ ಮುಂತಾದ ನೀರಿನ ವ್ಯವಸ್ಥೆಯನ್ನು ಮಾಡಿಕೊಡುವ ಯೋಜನೆ ಹಮ್ಮಿಕೊಂಡಿದೆ. ಅದರಂತೆ ದಕ್ಕೆ ಸ್ಥಾಪಿಸಿದ ನೀರಿನ ಘಟಕ 5ನೆಯದ್ದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Similar News