ಯೆನೆಪೋಯ: ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ
Update: 2023-03-10 21:58 IST
ಕೊಣಾಜೆ: ಯೆನೆಪೋಯ ದಂತ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕಾರ್ಯಕ್ರಮ ಯೆನೆಪೋಯ ದಂತ ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ಯೆನೆಪೋಯ ದಂತ ಮಹಾವಿದ್ಯಾಲಯ ಡಾ.ಲಕ್ಷ್ಮೀಕಾಂತ್ ಚಾತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಂತ ವೈದ್ಯ ವಿಭಾಗದ ಡೀನ್ ಡಾ.ಶಾಮ್ ಎಸ್ ಭಟ್ ಮತ್ತು ಕಾರ್ಯಕ್ರಮಾಧಿಕಾರಿ ಡಾ.ಇಮ್ರಾನ್ ಪಾಷಾ ಎಂ ಉಪಸ್ಥಿತರಿದ್ದರು. ಒಟ್ಟು 130 ಫಲಾನುಭವಿಗಳು ಕಾರ್ಡ್ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪ್ರಣಾಮ್, ನೈಮಾ, ರಕ್ಷಿತಾ, ಜೈದ್, ತೌಸಿಲ್, ಡಾ.ಪ್ರವೀಣಾ, ಡಾ.ಕೃಷ್ಣಪ್ರಕಾಶ್, ಡಾ.ಹಿಫ್ಸು ಅವರು ಭಾಗವಹಿಸಿದ್ದರು.