ʼಹರೀಶ್ ಸಾಂತ್ವನ ಯೋಜನೆʼ ರದ್ದು ಮಾಡಿದ ಬಿಜೆಪಿ ಸರ್ಕಾರಕ್ಕೆ ಜನತೆಯ ಶಾಪ ತಟ್ಟದೆ ಇರದು: ಸುಧೀರ್ ಕುಮಾರ್ ಮುರೋಳಿ

ಫರಂಗಿಪೇಟೆಯಲ್ಲಿ ʼಪ್ರಜಾಧ್ವನಿʼ ಯಾತ್ರೆ ಕಾರ್ಯಕ್ರಮ

Update: 2023-03-19 17:21 GMT

ಬಂಟ್ವಾಳ: ಕರ್ನಾಟಕದ ಸಮಸ್ತ ಜನತೆಯ ಧ್ವನಿಯಾಗಿ ಕಾರ್ಯನಿರ್ವಹಿಸುವ ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿದ್ದ ವೇಳೆ ಜಾರಿಗೆ ತಂದ ʼಹರೀಶ್ ಸಾಂತ್ವನ ಯೋಜನೆʼಯನ್ನು ರದ್ದು ಮಾಡಿದ ಬಿಜೆಪಿ ಸರ್ಕಾರಕ್ಕೆ ಜನತೆಯ ಶಾಪ ತಟ್ಟದೇ ಇರಲಾರದು ಎಂದು  ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೋಳಿ ಹೇಳಿದರು.

ಫರಂಗಿಪೇಟೆ ಜಂಕ್ಷನ್ ನಲ್ಲಿ ರವಿವಾರ ನಡೆದ ಪುದು ಗ್ರಾಮ ಪಂಚಾಯತ್ ಚುನಾಯಿತ ನೂತನ ಸದಸ್ಯರಿಗೆ ಸನ್ಮಾನ, ಮತದಾರರಿಗೆ ಅಭಿನಂದನೆ ಹಾಗೂ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಂಗಳೂರು ಶಾಸಕ ಯು.ಟಿ.ಖಾದರ್ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೆ  ಸರ್ವರ ಪ್ರೀತಿ, ವಿಶ್ವಾಸದ ಮೂಲಕ ಪಕ್ಷದ ಗೆಲುವಿಗೆ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದ ಅವರು  ಕಾಂಗ್ರೆಸ್ ಪಕ್ಷವನ್ನು ಸೋಲಿಸಿ, ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಮುಂದಾಗಿರುವ ಎಸ್ಡಿಪಿಐ ಪಕ್ಷದ ಒಳ ಮೈತ್ರಿಯ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಕೆ. ಸಾಹುಲ್ ಹಮೀದ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಕವಿ ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ ಮಾತನಾಡಿದರು.

ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕಾಂಗ್ರೆಸ್ ಕಾರ್ಮಿಕ ಜಿಲ್ಲಾದ್ಯಕ್ಷ ಲಾರೆನ್ಸ್, ಪ್ರಮುಖರಾದ ಸುಹೈಲ್ ಖಂದಕ್, ದುರ್ಗಾ ಚರಣ್, ಇಸ್ಮಾಯಿಲ್ ಕೆ.ಇ.ಎಲ್, ಅಬೂಬಕ್ಕರ್ ಕುಂಜತ್ತಬೈಲ್, ಲತೀಫ್ ಅರಫಾ, ಇಮ್ತಿಯಾಝ್, ಜಗದೀಶ್, ವೃಂದಾ ಪೂಜಾರಿ, ನಿಸಾರ್, ಎಫ್.ಎ.ಅಬ್ದುಲ್ ಖಾದರ್, ಸಮೀರ್ ಫಜೀರ್, ಮುಸ್ತಫಾ ಹರೇಕಳ, ಸಿದ್ದೀಕ್ ಅಮ್ಮೆಮಾರ್, ಬಶೀರ್, ಹೈದರ್, ಮಜೀದ್ ಫರಂಗಿಪೇಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ದುರು ಗ್ರಾ.ಪಂ. ನ ಚುನಾಯಿತ 21 ಸದಸ್ಯರುಗಳಾದ ರಮ್ಲಾನ್ ಮಾರಿಪಲ್ಲ, ಇಕ್ಬಾಲ್ ಸುಜೀರು, ವಿಶು ಕುಮಾರ್, ಮುಹಮ್ಮದ್ ಮೋನು, ಇಶಾಂ ಫರಂಗಿಪೇಟೆ, ರಿಯಾಝ್ ಕುಂಪನಮಜಲು, ಹುಸೈನ್ ಪಾಡಿ,  ಹಾಸಿರ್ ಪೆರಿಮಾರ್ , ರಝಾಕ್ ಅಮ್ಮೆಮಾರ್, ಮುಹಮ್ಮದ್ ಅನಸ್, ಲಿಡಿಯೋ ಪಿಂಟೋ, ರಶೀದಾ, ರಹೀನ, ಮುಮ್ತಾಝ್, ಝೀನತ್, ರಝಿಯಾ, ಜಯಂತಿ, ನೆಬಿಸಾ, ರುಕ್ಸಾನಾ, ಸಾರಮ್ಮ, ಆತಿಕಾ ಇವರನ್ನು ಸನ್ಮಾನಿಸಲಾಯಿತು.

ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಆಸಿಫ್ ಇಕ್ಬಾಲ್ ಸ್ವಾಗತಿಸಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಪ್ರಸ್ತಾವನೆಗೈದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Similar News