ಮಂಗಳೂರು: ಕಣ್ಣಿನ ತಪಾಸಣಾ ಶಿಬಿರ ಉದ್ಘಾಟನೆ

Update: 2023-03-20 16:41 GMT

ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜರವರ ನೇತೃತ್ವದಲ್ಲಿ ನಗರದ ರಥಬೀದಿಯ  ಬಿ.ಇ.ಎಂ ಶಾಲೆಯ ಸಭಾಂಗಣದಲ್ಲಿ ಉಚಿತವಾಗಿ  ಕಣ್ಣಿನ  ತಪಾಸಣಾ ಶಿಬಿರ ನಡೆಯಿತು.

ಶಿಬಿರದಲ್ಲಿ 450 ಮಂದಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಿದರು. ಶಿಬಿರವನ್ನು ಶಾಸಕ ಡಾ.ಮಂಜುನಾಥ್ ಭಂಡಾರಿ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ನವೀನ್ ಡಿ ಸೋಜ, ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾಜಿ ಮನಪಾ ಸದಸ್ಯ ಪದ್ಮನಾಭ ಅಮೀನ್, ಪದ್ಮನಾಭ ಪಣಿಕರ್, ಕೆ.ಭಾಸ್ಕರ್ ರಾವ್ ಹಾಗೂ ಎ.ಜೆ ಆಸ್ಪತ್ರೆ ಪ್ರಸೂತಿ ಮತ್ತು ಹೆರಿಗೆ ತಜ್ಞೆ ಡಾ.ಕವಿತಾ ಡಿ.ಸೋಜ ಉಪಸ್ಥಿತರಿದ್ದರು.

ಕಾಂಗ್ರೆಸ್ ನಾಯಕರುಗಳಾದ  ಭರತ್ ಮುಂಡೋಡಿ, ಸುಹೇಲ್ ಕಂದಕ್, ಶಾಂತಲಾ ಗಟ್ಟಿ, ಸಿರಿಲ್ ಡಿ ಸೋಜ, ಜೇಮ್ಸ್, ಪ್ರವೀಣ್,ಅಸ್ಲಾಂ, ಟಿ.ಸಿ.ಗಣೇಶ್, ನಿರಂಜನ್, ಸಮರ್ಥ್ ಭಟ್, ಪ್ರೇಮ್ ಬಲ್ಲಾಳ್ ಭಾಗ್, ಶುಭೋದಯ ಆಳ್ವ, ಇಮ್ರಾನ್ ಬಂದರ್, ಯೂಸೂಫ್ ಉಚ್ಚಿಲ್, ಬಾಜಿಲ್ ರೊಡ್ರಿಗಸ್ ಮುಂತಾದವರು ಉಪಸ್ಥಿತರಿದ್ದರು.

Similar News