ಛಾಯಗ್ರಾಹಕ ಜಿನೇಶ್ ಪ್ರಸಾದ್‌ಗೆ ರಾಷ್ಟ್ರೀಯ ‘ಚಿತ್ರಾಂಜಲಿ ಪ್ರಶಸ್ತಿ’ಪ್ರದಾನ

Update: 2023-03-20 16:50 GMT

ಮಂಗಳೂರು: ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ನೀಡುವ ನವದೆಹಲಿಯ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ ಸಂಸ್ಥೆಯ ಅತ್ಯುನ್ನತ ವಾರ್ಷಿಕ ‘ಚಿತ್ರಾಂಜಲಿ ಪ್ರಶಸ್ತಿ’ಯನ್ನು  ಅಂತರ್ರಾಷ್ಟ್ರೀಯ ಖ್ಯಾತಿಯ  ಕನ್ನಡಿಗ ಛಾಯಗ್ರಾಹಕ  ಜಿನೇಶ್ ಪ್ರಸಾದ್‌ಗೆ ರವಿವಾರ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಪ್ರಶಸ್ತಿ ಪ್ರದಾನಗೈದರು. ಪ್ರಶಸ್ತಿಯು 1 ಲಕ್ಷ ರೂ. ನಗದು, ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಮೂರೂವರೆ  ದಶಕಗಳ ಹಿಂದೆಯೇ ‘ಪೊರ್ಲು’ ಎಂಬ ಹೆಸರಿನೊಂದಿಗೆ ಛಾಯಾಚಿತ್ರ ರಂಗದಲ್ಲಿ ಛಾಪು ಮೂಡಿ ಸಿದ್ದ ಜಿನೇಶ್ ಪ್ರಸಾದ್ ನೂರಕ್ಕೂ  ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದಾರೆ. ದೇಶ ವಿದೇಶಗಳಲ್ಲಿ ಛಾಯಾಚಿತ್ರ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

Similar News