ಉಚ್ಚಿಲ ಭಾಸ್ಕರನಗರ ಮಸೀದಿ ಅಧ್ಯಕ್ಷರಾಗಿ ರಫೀಕ್ ಎಸ್.ಕೆ.

Update: 2023-03-24 13:36 GMT

ಕಾಪು : ಉಚ್ಚಿಲ ಭಾಸ್ಕರನಗರದ ಸೈಯ್ಯದ್ ಅರಬೀ ಜುಮಾ ಮಸೀದಿ ಹಾಗೂ ಮದ್ರಸದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಎಸ್.ಕೆ. ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಮದ್ರಸ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ೨೦೨೩-೨೪ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಬೂಬಕ್ಕರ್ ಮೂಸಾ, ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್ ವೈ.ಎಸ್., ಪ್ರಧಾನ ಕಾರ್ಯದರ್ಶಿಯಾಗಿ ಶಬೀರ್ ಇಸ್ಮಾಯಿಲ್, ಜೊತೆ ಕಾರ್ಯದರ್ಶಿ ಗಳಾಗಿ ಇಲ್ಯಾಸ್ ದೇಜಾಡಿ, ಬಶೀರ್ ಪಡು, ಕೋಶಾ ಧಿಕಾರಿಯಾಗಿ ಇದ್ದಿನಬ್ಬ ತರೀಕೆರೆ, ಲೆಕ್ಕಪರಿಶೋಧಕರಾಗಿ ಪಿ.ಮುಹಮ್ಮದ್ ಹಾಜಿ, ಪಾತ್ರೆ ಉಸ್ತುವಾರಿಯಾಗಿ ಕೆ.ಹಸನಬ್ಬ, ಹಾಲ್ ಉಸ್ತುವಾರಿಯಾಗಿ ಇಬ್ರಾಹಿಂ ತವಕ್ಕಲ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಉಸ್ಮಾನ್ ಹಾಜಿ ಕಟ್ಟಿಂಗೇರಿ, ಇಸ್ಮಾಯಿಲ್ ಬಾವ, ಇಬ್ರಾಹಿಂ ಸೈಯ್ಯದ್, ಅಬ್ದುಲ್ ಅಝೀಝ್, ಸಂಶುದ್ದೀನ್ ಹಸನ್, ಹಮೀದ್ ಹಾಜಿ, ಅಬ್ದುಲ್ ರೆಹಮಾನ್ ಹಾಜಿ, ಅಶ್ರಫ್ ಮುಸ್ಲಿಯಾರ್, ಶಬೀರ್ ಸಖಾಫಿ, ರಹೀಂ ಎಚ್.ಆರ್., ರಫೀಕ್ ಮೋನು, ಅಬ್ದುಲ್ ರಝಾಕ್ ಮೋನಬ್ಬ ಆಯ್ಕೆಯಾದರು.

Similar News