ದ.ಕ ಜಿಲ್ಲಾ ಚುನಾವಣಾ ಅಕ್ರಮ ತಡೆ ಅಧಿಕಾರಿಯಾಗಿ ಮಂಜುನಾಥ್ ಹೆಚ್.ಎಸ್ ನೇಮಕ

ಸಾರ್ವಜನಿಕರಿಗೆ ದೂರು ಸಲ್ಲಿಸಲು ಅವಕಾಶ

Update: 2023-03-25 06:07 GMT

ಮಂಗಳೂರು, ಮಾ.25: ದ.ಕ ಜಿಲ್ಲಾ ಚುನಾವಣಾ ಅಕ್ರಮ ತಡೆಗಟ್ಟುವ ಅಧಿಕಾರಿಯಾಗಿ ಮಂಜುನಾಥ್ ಹೆಚ್.ಎಸ್ ನೇಮಕಗೊಂಡಿದ್ದು, ಚುನಾವಣೆಗೆ ಸಂಬಂಧಿಸಿದ ಅಕ್ರಮದ ಕುರಿತು ದೂರು ಸಲ್ಲಿಸಬಹುದಾಗಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯದ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ ಚುನಾವಣಾ ಮಾದರಿ ನೀತಿ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಾರಿಗೊಳಿಸಿ ಚುನಾವಣೆ ಸುಗಮವಾಗಿ ಮುಕ್ತವಾಗಿ ಹಾಗೂ ಶಾಂತಿಯುತವಾಗಿ ನಡೆಸುವ ಕುರಿತು ಯಾವುದೇ ರೀತಿಯ ಚುನಾವಣೆಯ ಅಕ್ರಮಗಳು ನಡೆಯದಂತೆ ನಿಗಾವಹಿಸುವ ಕ್ರಮಕೈಗೊಳ್ಳುವ ಕುರಿತು Shri. MANJUNATH H.S. I.R.S., DEPUTY DIRECTOR OF INCOME TAX, ಇವರನ್ನು ಚುನಾವಣಾ ಅಕ್ರಮ ತಡೆಗಟ್ಟುವ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಅಕ್ರಮ ಹಣ ಸಾಗಾಟ, ಅಕ್ರಮ ವಸ್ತುಗಳ ಸಾಗಾಟ ಮತ್ತು ದಾಸ್ತಾನುಗಳು ಹಾಗೂ ಚುನಾವಣಾ ಪ್ರಚೋದನೆಗೆ ಸಂಬಂಧಿಸಿದಂತೆ ಇನ್ನಿತರ ಅಕ್ರಮಗಳು ಕಂಡು/ತಿಳಿದು ಬಂದಲ್ಲಿ ಸಾರ್ವಜಿನಿಕರು Shri. MANJUNATH H.S. I.R.S., ಇವರ ಮೊಬೈಲ್ ದೂರವಾಣಿ ಸಂಖ್ಯೆ:9353341788ಕ್ಕೆ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ. 

ಲಿಖಿತವಾಗಿ ದೂರುಗಳಿದ್ದಲ್ಲಿ ಈ ಕೆಳಕಾಣಿಸಿದ ವಿಳಾಸ ಹಾಗೂ ಮಿಂಚಂಚೆಗೆ ಕೂಡ ಸಲ್ಲಿಸಬಹುದಾಗಿದೆ.

DEPUTY DIRECTOR OF INCOME TAX, ALBUQUERE HOUSE, OPP FORUM FIZA MALL, PANDESHWAR ROAD, MANGALURU - 575 001 Mobile No.9353341788 023023 (E-Mail ID):- Mangalore.ddit.inv2@incometax.gov.in

Similar News