ಮಂಗಳೂರು| ಬೀದಿ ಬದಿ ವ್ಯಾಪಾರಿಗಳ ಮೇಲೆ ಪೊಲೀಸ್ ದೌರ್ಜನ್ಯ: ಆರೋಪ

Update: 2023-03-25 08:10 GMT

ಮಂಗಳೂರು, ಮಾ.25: ನಗರದ ಬೀದಿ ಬದಿ ವ್ಯಾಪಾರಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ನಗರದ ರಾವ್ ಅ್ಯಂಡ್ ರಾವ್ ಸರ್ಕಲ್ ಬಳಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಅಬ್ದುಲ್ ಖಾಲಿದ್ ಮತ್ತು ಮುಹಮ್ಮದ್ ರಿಯಾಝ್ ಎಂಬ ವ್ಯಾಪಾರಿಯ ಬಳಿ ಇಂದು ಬೆಳಗ್ಗೆ ಬಂದ ಬಂದರು ಠಾಣೆಯ ಪೊಲೀಸರು ಬೀದಿಬದಿ ವ್ಯಾಪಾರ ತೆರವು ಮಾಡಬೇಕು ಎಂದು ಸೂಚಿಸಿ,  ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.

ಅಲ್ಲದೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತಳ್ಳುಗಾಡಿಗಳನ್ನು ವಶಕ್ಕೆ ಪಡೆದಿದ್ದರು. ನಂತರ ಪೊಲೀಸರ ವಶದಲ್ಲಿದ್ದ ಬೀದಿ ವ್ಯಾಪಾರಿಗಳ ಬಿಡುಗಡೆಯಾಗಿದ್ದು, ವ್ಯಾಪಾರಿಗಳು ತಳ್ಳುಗಾಡಿ ಮತ್ತು ಮಾರಾಟದ ಸರಕುಗಳೊಂದಿಗೆ ಮೆರವಣಿಗೆ ನಡೆಸಿದ್ದಾರೆ.

Similar News