ವಿದುಷಿ ನಯನಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ

Update: 2023-03-30 16:58 GMT

ಕೊಣಾಜೆ: ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು 2022-23ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಮಂಗಳೂರು ತಾಲೂಕು ಎಡಪದವಿನ ವಿದುಷಿ ನಯನ ಕೆ.ಅವರು ಆಯ್ಕೆಯಾಗಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕರು, ನೃತ್ಯ ಶಿಕ್ಷಕರಾಗಿರುವ ನಯನ ಭರತನಾಟ್ಯ ಕ್ಷೇತ್ರದಲ್ಲಿ ಸಾಧಿಸಿದ ಅಪಾರ  ಸಾಧನೆಗಾಗಿ ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ನಿವೃತ್ತ ಪೋಸ್ಟ್ ಮಾಸ್ಟರ್  ವಿಠಲ ಮತ್ತು  ನಿವೃತ್ತ ಕಂದಾಯ ಅಧಿಕಾರಿ ಹರಿಣಿ ದಂಪತಿಯ ಪುತ್ರಿಯಾಗಿರುವ ಇವರು ಕಲಾವಿದ ಲಕ್ಷ್ಮಣ ಅವರ ಪತ್ನಿ. ಎ.9 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಆವರಣದ ಅಕ್ಕಾಮಹಾದೇವಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

Similar News