ತೊಕ್ಕೊಟ್ಟು: ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ ಎಸ್.ವೈ.ಎಸ್ ವತಿಯಿಂದ ​ರಂಜಾನ್ ಕಿಟ್ ವಿತರಣೆ

Update: 2023-04-01 06:33 GMT

ಉಳ್ಳಾಲ,ಎ.1: ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ ಎಸ್ ವೈ ಎಸ್ ತೊಕ್ಕೊಟ್ಟು ಯುನಿಟ್ ವತಿಯಿಂದ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮವು ಎಸ್ ವೈ ಎಸ್ ತೊಕ್ಕೊಟ್ಟು ಯುನಿಟ್ ಉಪಾಧ್ಯಕ್ಷ ಇಲ್ಯಾಸ್ ಸಖಾಫಿ ಉಸ್ತಾದ್ ನೇತೃತ್ವದಲ್ಲಿ ಮುಂಡೋಳಿಯಲ್ಲಿ ನಡೆಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ತೊಕ್ಕೊಟ್ಟು ಯುನಿಟ್ ಅಧ್ಯಕ್ಷ ಮುಹಮ್ಮದ್ ತೊಕ್ಕೊಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಮದನಿ ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ವೇ ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯದ್ ಮದನಿ ದರ್ಗಾ ಕೋಶಾಧಿಕಾರಿ ಹಾಜಿ ನಾಝಿಮ್ ಮುಕಚೇರಿ ರಂಜಾನ್ ಕಿಟ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಅಮೀರ್ ಪಿಲಾರ್, ಅಬ್ದುಲ್ ಖಾದರ್ ದಾರಂದಬಾಗಿಲು ,ಮುಸ್ತಫಾ ದಾರಂದ ಬಾಗಿಲು, ಬಶೀರ್ ಅಜಾದ್ ನಗರ, ಶಮೀರ್ ಪಿಲಾರ್, ಮನ್ಸೂರ್ ಮುಂಡೋಲಿ ಉಪಸ್ಥಿತರಿದ್ದರು. ಅಬ್ದುಲ್ ಲತೀಫ್ ಸ್ವಾಗತಿಸಿ ಅಮೀರ್ ತೊಕ್ಕೊಟ್ಟು ವಂದಿಸಿದರು.

Similar News