ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಬಗ್ಗೆ ಚರ್ಚೆಯಾಗಿಲ್ಲ: ಬಸವರಾಜ ಬೊಮ್ಮಾಯಿ

''ಈ ಚುನಾವಣೆ ಮೋದಿ ಅವರ ಸೋಲಲ್ಲ''

Update: 2023-05-14 09:45 GMT

ಬೆಂಗಳೂರು: ''ಈ ಚುನಾವಣೆ ಪ್ರಧಾನಿ ಮೋದಿ ಅವರ ಸೋಲಲ್ಲ, ಮೋದಿ ರಾಷ್ಟ್ರೀಯ ನಾಯಕರು. ಕಾಂಗ್ರೆಸ್ ನಾಯಕತ್ವ ಇಡೀ ದೇಶದಲ್ಲಿ ಸೋತಿದೆ. ಇದೊಂದು ಸೋತಿರುವುದಕ್ಕೆ ಇಡೀ ದೇಶ ಸೋತಿಲ್ಲ ಅವರು ಇಡೀ ದೇಶ ಗೆದ್ದಿಲ್ಲ'' ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯ ಬಿಜೆಪಿ ಘಟಕ ಅಧ್ಯಕ್ಷರ ರಾಜೀನಾಮೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ವಿಪಕ್ಷ ನಾಯಕನ ಸ್ಥಾನದ ಬಗ್ಗೆ ಇದುವರೆಗೂ ಚರ್ಚೆಯಾಗಿಲ್ಲ. ಫಲಿತಾಂಶದ ಬಗ್ಗೆ ಹೈಕಮಾಂಡ್ ನಾಯಕರು ಧೈರ್ಯ ಹೇಳಿದ್ದಾರೆ' ಎಂದು ತಿಳಿಸಿದರು. 

'ನಮ್ಮಲ್ಲಿ ಪಕ್ಷ ಸಂಘಟನೆಗೆ ವಿಶ್ರಾಂತಿ ಇರಲ್ಲ. ಚುನಾವಣೆ ಸೋಲನ್ನು ಬಹಳ ವಿನಯದಿಂದ ಸ್ವೀಕಾರ ಮಾಡಿದ್ದೇವೆ' ಎಂದು ತಿಳಿಸಿದರು. 

Similar News